News Kannada
Sunday, April 02 2023

ಮಂಗಳೂರು

ಕಾರ್ಮಿಕರ ಮುಷ್ಕರ: ಕಸವಿಲೇವಾರಿಯಿಲ್ಲದೆ ನಗರದಲ್ಲಿ ತ್ಯಾಜ್ಯ ರಾಶಿ

mangaluru-workers-strike-fails-to-yield-results
Photo Credit : News Kannada

ಮಂಗಳೂರು: ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ನಡೆಯು ತ್ತಿರುವ ಪ್ರತಿಭಟನೆ ಮುಂದುವರಿದಿದ್ದು ಮಂಗಳೂರಿನಲ್ಲಿ ಸ್ವಚ್ಚತಾ ಕಾರ್ಮಿಕರು ಮುಷ್ಕರ ಕೈಗೊಂಡಿದ್ದಾರೆ. ಪರಿಣಾಮವಾಗಿ ಮಂಗಳೂರು ನಗರದಲ್ಲಿಯೂ ಹಲವು ದಿನಗಳಿಂದ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ. ಪರಿಣಾಮ, ಕಸದ ರಾಶಿ ಮನೆಬಾಗಿಲಿನಲ್ಲಿದೆ. ಅನೇಕ ರಸ್ತೆ ಓಣಿಗಳಲ್ಲಿ ರಾಶಿ ಬಿದ್ದ ಕಸ ಕೊಳೆತು ನಾರುತ್ತಿದೆ.

ಪಾಲಿಕೆಯ ಒಳಚರಂಡಿ ಕಾರ್ಮಿ ಕರು, ಎಸ್‌ಟಿಪಿ ಆಪರೇಟರ್ ಗಳು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿರುವುದರಿಂದ ನಗರದಲ್ಲಿ ಕೆಲವು ದಿನಗಳಿಂದ. ಒಳಚರಂಡಿ ಸಮಸ್ಯೆ ಬಹುವಾಗಿ ಕಾಡಲಾರಂಬಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಶುಕ್ರವಾರ ಎಸ್. ಟಿಪಿ ಮತ್ತು ಒಳಚರಂಡಿ ಕಾರ್ಮಿಕರ ಮನವೊಲಿಸಲು ಸಭೆ ನಡೆಸಿದ್ದಾರೆ. ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆದು ಕೆಲಸ ಆರಂಭಿಸುವುದಾಗಿ ಒಪ್ಪಿಕೊಂಡಿದ್ದಾರೆ.

ಇಂದು ಮೇಯರ್‌ ಸಭೆ: ಪಾಲಿಕೆಯ ಒಳಚರಂಡಿ ಕಾರ್ಮಿಕರು, ಎಸ್‌ಟಿಪಿ ಆಪರೇಟರ್‌ಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮೇಯರ್‌ ಜಯಾನಂದ ಅಂಚನ್‌ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಲಿದೆ.

See also  ಮಂಗಳೂರು: ಮಿಲಾಗ್ರಿಸ್ ವಿದ್ಯಾಸಂಸ್ಥೆಯಲ್ಲಿ ಅವಿಷ್ಕಾರ್ 2022 ಸಾಂಸ್ಕೃತಿಕ ಹಬ್ಬ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು