News Kannada
Saturday, March 25 2023

ಮಂಗಳೂರು

ಬೆಳ್ತಂಗಡಿ: ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸಲಕರಣೆ ವಿತರಣೆ

Belthangady: Distribution of equipment provided by various departments to eligible beneficiaries
Photo Credit : News Kannada

ಬೆಳ್ತಂಗಡಿ: ತಾಲೂಕು ಪಂಚಾಯಿತಿ ಬೆಳ್ತಂಗಡಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕೃಷಿ ಇಲಾಖೆ ಬೆಳ್ತಂಗಡಿ ಇದರ ಜಂಟಿ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ವಿವಿಧ ಇಲಾಖೆಗಳಿಂದ ನೀಡಲ್ಪಡುವ ಸಲಕರಣೆಗಳ ವಿತರಣಾ ಕಾರ್ಯಕ್ರಮ ಬೆಳ್ತಂಗಡಿ ಮಿನಿ ವಿಧಾನಸೌಧ ಆವರಣದಲ್ಲಿ ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅರ್ಹ ಫಲಾನುಭವಿಗಳಿಗೆ ಸಲಕರಣೆಯನ್ನು ವಿತರಿಸಿ ಮಾತನಾಡಿ, ಸಾಮಾನ್ಯರಂತೆ ವಿಕಲಾಂಗರು ಜೀವನ ನಡೆಸಬೇಕೆಂಬ ಸದುದ್ದೇಶದಿಂದ ತಾಲೂಕಿನಲ್ಲಿ ಈಗಾಗಾಗಲೆ ರಾಜ್ಯದಲ್ಲೆ ಅತೀ ಹೆಚ್ಚು ಸಲಕರಣೆ ವಿತರಿಸುವ ಕಾರ್ಯವಾಗಿದೆ. ಈಮೂಲಕ ಅವರ ಬಾಳಲ್ಲಿ ಮಂದಹಾಸ ಹಾಗೂ ಆತ್ಮವಿಶ್ವಾಸ ಮೂಡಿಸುವ ಕಾರ್ಯವಾಗಿದೆ ಎಂದರು.

ರಾಜ್ಯದಲ್ಲಿ ಮೊದಲಬಾರಿಗೆ ವಿಕಲಾಂಗರಿಗೆ ತ್ರಿಚಕ್ರ ವಿತರಿಸುವ ಕಾರ್ಯ ಬೆಳ್ತಂಗಡಿಯಲ್ಲಾಗಿದೆ. ಅದರೊಂದಿಗೆ ಕೃಷಿಕರಿಗೆ, ಕೈಗಾರಿಕ ಉಪಯೋಗಕ್ಕೆ ಸಲಕರೆಣೆ ಸಹಿತ ಕಾರ್ಮಿಕ ಇಲಾಖೆಗಿಂದ 18 ಕೋ.ರೂ. ಅಧಿಕ ಕಾರ್ಮಿಕ ಯೋಗ್ಯ ಸವಲತ್ತು ಒದಗಿಸಲಾಗಿದೆ. ಮುಂದಿನ ಅವಧಿಯಲ್ಲಿ ಜನತೆ ಆಶೀರ್ವಾದ ಮಾಡಿದಲ್ಲಿ ವ್ಯಕ್ತಿ ವ್ಯಕ್ತಿಯನ್ನು ಗುರುತಿಸಿ ಸವಲತ್ತನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

12 ಜನ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ರೆಟ್ರೋ ಫಿಟ್ ಮೆಂಟ್, 6 ಜನ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ಶ್ರವಣ ಸಾಧನ, 3 ಜನ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ಅಧ್ಯಯನ ಮಾಡುವ ಗಾಲಿ ಕುರ್ಚಿ, 2 ಜನ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ಒರಗುವ ಗಾಲಿ ಕುರ್ಚಿ, 129 ಜನ ಅರ್ಹ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಹಾಗೂ ಸಾಧನ ಸಲಕರಣೆ, 23 ಜನ ಅರ್ಹ ಕೃಷಿಕ ಫಲಾನುಭವಿಗಳಿಗೆ ಕೃಷಿ ಸಾಧನಾ ಸಲಕರಣೆ ಗಳನ್ನು ವಿತರಿಸಲಾಯಿತು.

ಬೆಳ್ತಂಗಡಿ ಪಟ್ಟಣ ಪಂಷಾಯಿತಿ ಉಪಾಧ್ಯಕ್ಷ ಜಯಾನಂದ ಗೌಡ, ಬೆಳ್ತಂಗಡಿ ತಾ.ಪಂ. ಇಒ ಕುಸುಮಾಧರ್, ಬೆಳ್ತಂಗಡಿ ಕೃಷಿ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್, ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ಮಂಜುನಾಥ ಹೆಗ್ಡೆ, ತಾಂತ್ರಿಕ ಕೃಷಿ ಅಧಿಕಾರಿ ಹುಮೇರ ಜಬೀನ್, ಪುನರ್ವಸತಿ ಕಾರ್ಯಕರ್ತರ ತಾ.ಪಂ. ಸಂಯೋಜಕ ಜಾನ್ ಬ್ಯಾಸ್ಟಿಸ್ ಡಿಸೋಜ, ತಾ.ಪಂ. ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರ್ವಹಿಸಿದರು.

See also  ಬಂಟ್ವಾಳ: ಮೊದಲ ಬಾರಿಗೆ ಆಯೋಜನೆಯಾದ  ಜಿಲ್ಲಾ ಮಟ್ಟದ  ಜಂಪ್  ರೋಪ್ ಸ್ಪರ್ಧೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು