News Kannada
Sunday, October 01 2023
ಮಂಗಳೂರು

ಬಂಟ್ವಾಳ: ನ್ಯಾಯಾಂಗ ಪ್ರಾಮಾಣಿಕವಾಗಿ ವರ್ತಿಸಿದರೆ ಬಿಜೆಪಿಯ ಶೇ.75 ಸಂಸದರು ಜೈಲಲ್ಲಿರುತ್ತಾರೆ

75 per cent of BJP MPs will be in jail if the judiciary behaves honestly.
Photo Credit : News Kannada

ಬಂಟ್ವಾಳ: ನ್ಯಾಯಾಂಗ ಪ್ರಾಮಾಣಿಕವಾಗಿ ವರ್ತಿಸಿದರೆ ಬಿಜೆಪಿಯ ಶೇ.75 ಸಂಸದರು ಜೈಲಲ್ಲಿರುತ್ತಾರೆ ಎಂದು  ಕಾಂಗ್ರೆಸ್ ಮುಖಂಡ ಎಂ. ಜಿ. ಹೆಗಡೆ ಹೇಳಿದರು.

ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ  14 ದಿನಗಳ ಕಾಲ ನಡೆಯುತ್ತಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ರಾಯಿಯಲ್ಲಿ  ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.

ರಾಹುಲ್ ಗಾಂಧಿಗೆ ಜೈಲು ಶಿಕ್ಷೆಯಾಗಿರುವುದನ್ನು ಉಲ್ಲೇಖಿಸಿ ಮಾತನಾಡಿದ ಅವರು,  ಸಿದ್ದರಾಮಯ್ಯರನ್ನು ಮುಗಿಸಿಬಿಡಿ ಎಂದವರ ಮೇಲೆ ಯಾವುದೇ ಕೇಸ್ ದಾಖಲಿಸಿಲ್ಲ, ಪ್ರಶ್ನೆ ಮಾಡಿದವರನ್ನು ಹೊಸಕಿ ಹಾಕುವ ಪ್ರವೃತ್ತಿ ಬಿಜೆಪಿಯಿಂದ ನಡೆಯುತ್ತಿದೆ ಎಂದರು.

ಭಾವನಾತ್ಮಕ ವಾಗಿ ಜನರನ್ನು ಹಾದಿ ತಪ್ಪಿಸುವ ಕಾರ್ಯ ಬಿಜೆಪಿ ಮಾಡುತ್ತಿತ್ತು. ಈಗ ಅದೇ ಹಿನ್ನಡೆಯಾಗುತ್ತಿದೆ. ಈಗ ಎಲ್ಲರಿಗೂ ಜ್ಞಾನೋದಯವಾಗಿದೆ ಎಂದರು. ಬಿಜೆಪಿಗೆ ಅಭಿವೃದ್ಧಿಯ ಕತೆ ಬೇಡ. ಇಡಿ, ಸಿಡಿ, ಬೀಡಿ ಸೂತ್ರದಲ್ಲಿ ಬಿಜೆಪಿ ನಡೆಯುತ್ತಿದೆ ಎಂದು ಲೇವಡಿ ಮಾಡಿದ ಅವರು ಅಭಿವೃದ್ಧಿಯೇ  ರಾಜಕಾರಣದ  ಚುನಾವಣೆಯ ಮಂತ್ರವಾಗಬೇಕು ಎಂದು ತಿಳಿಸಿದರು. ‌ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ.  ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಶ್ರೀಮಂತರಿಂದ ಬಡವರಿಗೆ ಕೊಡುವುದು ಕಾಂಗ್ರೆಸ್ ಕಾರ್ಯಕ್ರಮವಾದರೆ ಬಡವರಿಂದ ಅದಾನಿ ಅಂಬಾನಿಯಂತಹ ಕಾರ್ಪೋರೇಟ್ ಶ್ರೀಮಂತರಿಗೆ ನೀಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ವಿರೋಧ ಪಕ್ಷದ ಶಾಸಕನಾಗಿದ್ದಗಲೂ ಅಭಿವೃದ್ಧಿ ಕಾರ್ಯ ಮಾಡಿರುವುದನ್ನು ವಿರೋಧಪಕ್ಷದ ನಾಯಕರು ಒಪ್ಪಿಕೊಂಡಿದ್ದಾರೆ, ಕೊಲೆಗಡುಕರನ್ನು ವೈಭವೀಕರಣ ಮಾಡುವವ ಇವರಿಂದ ನೈತಿಕತೆಯ ಮಾತುಗಳನ್ನು ಕೇಳುವ ಅಗತ್ಯ ಇಲ್ಲ ಎಂದರು.

ಯಾತ್ರೆಯ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಕ್ಷ ಪ್ರಮುಖರಾದ ಪದ್ಮಶೇಖರ್ ಜೈನ್, ಸುದರ್ಶನ್ ಜೈನ್, ಕೆ.ಸಂಜೀವ ಪೂಜಾರಿ, ಮಾಯಿಲಪ್ಪ ಸಾಲ್ಯಾನ್ ಸಂಪತ್ ಕುಮಾರ್ ಶೆಟ್ಟಿ, ಜಯಂತಿ ಪೂಜಾರಿ, ಸದಾಶಿವ ಬಂಗೇರ, ಮಹಮ್ಮದ್ ಶರೀಫ್, ಸುರೇಶ್ ಜೋರಾ,  ಐಡಾ ಸುರೇಶ್,  ಸಿದ್ದಿಕ್ ಗುಡ್ಡೆಯಂಗಡಿ, ಅಬ್ದುಲ್ ರಝಾಕ್ ಕುಕ್ಕಾಜೆ, ಪದ್ಮನಾಭ ಸಾಮಂತ, ಚಿತ್ತರಂಜನ್ ಶೆಟ್ಟಿ, ಉಮೇಶ್ ಬೋಳಂತೂರು,ಚಂದ್ರಶೇಖರ ಪೂಜಾರಿ, ಪದ್ಮನಾಭ ರೈ, ವಾಸು ಪೂಜಾರಿ, ಉಮೇಶ್ ಕುಲಾಲ್, ಮನೊಹರ ನೆರಂಬೋಳು, ದೇವಪ್ಪ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಜಗದೀಶ್ ಕೊಯಿಲ ರಥ ಯಾತ್ರೆ ಸಾಗಿ ಬಂದ ನಾಲ್ಕು ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ವಾಚಿಸಿದರು. ರಾಜೀವ ಶೆಟ್ಟಿ ಎಡ್ತೂರು  ಕಾರ್ಯಕ್ರಮ ನಿರೂಪಿಸಿದರು.

See also  ಮಂಗಳೂರು: "ಸಾಧಕರ ಯಶೋಗಾಥೆ" ಸಂವಾದ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು