News Kannada
Saturday, June 03 2023
ಮಂಗಳೂರು

ಬೆಳ್ತಂಗಡಿ ಸಾಲು ಮರದ ವೃಕ್ಷ ಉದ್ಯಾನವನ ಲೋಕಾರ್ಪಣೆ

Belthangady Row Tree Park Inaugurated
Photo Credit : By Author

ಬೆಳ್ತಂಗಡಿ: ಬೆಳ್ತಂಗಡಿ ನಗರವನ್ನು ರಾಜ್ಯಕ್ಕೆ ಮಾದರಿಯಾಗಿ ಅಭಿವೃದ್ಧಿ ಪಡಿಸಬೇಕು ಎಂಬ ಸಂಕಲ್ಪ ಮಾಡಿದ್ದು ಅದರಲ್ಲಿ ಕುಡಿಯುವ ನೀರು ,ಇನ್ನಿತರ ಅಬಿವೃದ್ದಿಗೆ ಅನುದಾನ ನೀಡಿದ್ದು ಇದರ ಜೊತೆ 12 ಕೋಟಿ ವೆಚ್ಚದ ರಾಜ್ಯಕ್ಜೆ ಮಾದರಿ ಬಸ್ ನಿಲ್ದಾಣ, 2 ಕೋಟಿ ವೆಚ್ಚದಲ್ಲಿ ಗ್ರಂಥಾಲಯ, 7 ಕೋಟಿ ವೆಚ್ಚದಲ್ಕಿ ಅಂಬೇಡ್ಕರ್ ಭವನ,ಸುಮಾರು 12 ಎಕರೆ ಪ್ರದೇಶದಲ್ಲಿ ರೆಂಕೆದಗುತ್ತು ಬಳಿ ಸಂಪೂರ್ಣ ಸೌಲಭ್ಯ ಇರುವ ತಾಲೂಕು ಕ್ರಿಡಾಂಗಣ ನಿರ್ಮಾಣವಾಗಲಿದ್ದು ಇದರ ಜೊತೆಗೆ ಈಗಾಗಲೆ ವಿವಿಧ ರೀತಿಯ ಅನುದಾನ ಬಳಸಿ ಸಾಲುಮರದ ತಿಮ್ಮಕ ಉದ್ಯಾನವನ ನಿರ್ಮಿಸಿದ್ದು ಮುಂದೆ ತಾಲೂಕಿನ, ಜಿಲ್ಲೆಯ ಮತ್ತು ಕ್ಷೇತ್ರ ಧರ್ಮಸ್ಥಳದ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಇನ್ನು 15 ಕೋಟಿ ವೆಚ್ಚದಲ್ಲಿ ದೇಶಕ್ಕೆ ಮಾದರಿ ಉದ್ಯಾನವನ ನಿರ್ಮಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಶನಿವಾರ ಕರ್ನಾಟಕ ಸರಕಾರ ಅರಣ್ಯ ಇಲಾಖೆ, ಮಂಗಳೂರು ಅರಣ್ಯ ವಿಭಾಗ, ಬೆಳ್ತಂಗಡಿ ವಲಯದ ವತಿಯಿಂದ ಕಲ್ಲಗುಡ್ಡೆ ಬಳಿ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಲೋಕಾರ್ಪಣೆಗೊಳಿಸಿ ಮಾತನಾಡಿ ಅರಣ್ಯ ಸಂರಕ್ಷಣೆ ಮಾಡಬೇಕು ಎಂದು ಜಗತ್ತಿಗೆ ತಿಳಿಸಿದವರು ಭಾರತ ಅದಕ್ಕೆ ಮೂಲ ಪ್ರೇರಣೆ ದ.ಕ,ಉಡುಪಿ ಜಿಲ್ಲೆಯವರು ಇಲ್ಲಿಯವರಷ್ಟು ಅರಣ್ಯ ಪ್ರೀತಿಸುವವರು ಜಗತ್ತಿನಲ್ಲಿ ಇಲ್ಲ.ಇಲ್ಲಿನ ಉದ್ಯಾನವನ ಮನರಂಜನೆಗೆ ಮತ್ತು ಅರಣ್ಯ ಸಂರಕ್ಷಣೆಗೆ ಎಂದರು.ಅರಣ್ಯ ಇಲಾಖೆ ಮತ್ತು ನಗರ ಪಂಚಾಯತ್ ,ಮೇಲಂತ ಬೆಟ್ಟು,ಲಾಯಿಲ ಗ್ರಾಮ ಪಂಚಾಯತಿನ ಸಹಕಾರಕ್ಕೆ ಅಬಿನಂದಿಸುವುದಾಗಿ ತಿಳಿಸಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಸಾಲು ಮರದ ತಿಮ್ಮಕ್ಕ ಹಸಿರೆ ಮಹತ್ವ ಯಾಕೆ ನೀಡಿದ್ದಾರೆ ಎಂದರೆ, ಮಣ್ಣಿಲ್ಲದೆ ಮನುಷ್ಯನಿಲ್ಲ ಎಂದು.ಇಂದು ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜಾ ನಾಗರಹೊಳೆ ಉದ್ಯಾನವನಕ್ಕಿಂತ ಉತ್ತಮವಾದ ಉದ್ಯಾನವನ ನಿರ್ಮಿಸಿದಲ್ಲದೆ ರಾಜ್ಯಕ್ಕೆ ಮಾದರಿಯಾಗಿ 3500 ಕೋಟಿಗೂ ಅದಿಕ ಅನುದಾನ ತಂದು ತಾಲೂಕನ್ಬು ಅಬಿವ್ರುದ್ದಿ ಪಡಿಸಿದ್ದಾರೆ ಎಂದರು.

ಪ.ಪಂ.ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಮೇಲಂತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರಿಣಿ, ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವೈ.ಕೆ.ದಿನೇಶ್ ಕುಮಾರ್, ಅರಣ್ಯ ಜಾಗೃತಿದಳ ಎಸಿಆರ್ ಸುಬ್ರಹ್ಮಣ್ಯ ರಾವ್, ಸುಬ್ರಹ್ಮಣ್ಯ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಎಚ್.ಎಸ್., ಪ.ಪಂ. ಸದಸ್ಯರು, ಲಾಯಿಲ, ಮೇಲಂತಬೆಟ್ಟು ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಸ್ವಾಗತಿಸಿದರು. ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ. ವಂದಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ನಿರೂಪಿಸಿದರು.

ಅರಣ್ಯ ಇಲಾಖೆಯ 1.3 ಕೋ.ರೂ. ಹಾಗೂ ಇತರ ಅನುದಾನ ಸೇರಿ 2.60 ಕೋ.ರೂ. ವೆಚ್ಚದಲ್ಲಿ 17 ಹೆಕ್ಟೇರ್ ನಲ್ಲಿ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಮಕ್ಕಳಿಗೆ ಪ್ಲೇ ಗ್ರೌಂಡ್, ಓಪನ್ ಥಿಯೇಟರ್, ವಾಕಿಂಗ್ ಟ್ರ್ಯಾಕ್ ಸಹಿತ ಬಹಳಷ್ಟು ಸುಂದರವಾಗಿ ವೃಕ್ಷ ಉದ್ಯಾನವನ ನಿರ್ಮಿಸಲಾಗಿದೆ.

See also  ಬಂಟ್ವಾಳ: 'ಗ್ರಾಮ ವಿಕಾಸ ಪಾದಯಾತ್ರೆ' ಗ್ರಾಮದೆಡೆಗೆ ಶಾಸಕರ ನಡಿಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು