News Kannada
Saturday, June 03 2023
ಮಂಗಳೂರು

ಮಂಗಳೂರು ಕೊಟ್ಟಾರ ಕಲ್ಬಾವಿ ರಸ್ತೆಯ ಅಗಲೀಕರಣ ಹಾಗೂ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣ: ಉದ್ಘಾಟನೆ

Widening and concretization work of Mangaluru Kottara Kalbhavi Road completed
Photo Credit : News Kannada

ಮಂಗಳೂರು: ದೇರೆಬೈಲ್ ಪಶ್ಚಿಮ 25ನೇ ವಾರ್ಡಿನ ಮಂಗಳೂರು ಕೊಟ್ಟಾರ ಕಲ್ಬಾವಿ ರಸ್ತೆಯ ಅಗಲೀಕರಣ ಹಾಗೂ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು ಮಾ.24ರಂದು ಉದ್ಘಾಟನೆಗೊಂಡಿತು. ಈ ಸಂದರ್ಭ ಕಲ್ವಾವಿ ನಿವಾಸಿಗಳು ನೆಚ್ಚಿನ ಶಾಸಕರನ್ನು ಸನ್ಮಾನಿಸಿದರು.ಸನ್ಮಾನ ಸಂತೋಷದಿಂದ ಸ್ವೀಕರಿಸಿದ ಶಾಸಕರಾದ ವೇದವ್ಯಾಸ ಕಾಮತ್ ರವರು ಸ್ಥಳೀಯರು ರಸ್ತೆಗೆ ಸ್ಥಳ ದಾನ ಮಾಡಿ ಅಭಿವೃದ್ಧಿ ಗೆ ಸಹಕಾರ ನೀಡಿದ್ದಾರೆ.

ಈ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲ ಜಾತಿ ಮತ ಬೇದ ಮರೆತು ಕಾರ್ಯದಲ್ಲಿ ತೊಡಗಿದ್ದೇನೆ. ಎಂದರು , ಗುಣಮಟ್ಟದ ಕಾಮಗಾರಿ ಮಾಡಿಕೊಟ್ಟ ರಸ್ತೆ ಗುತ್ತಿಗೆದಾರರಾದ ಹೃತಿಕ್ ಕನ್ಸ್ಟ್ರಕ್ಷನ್ ಮಾಲಕರಾದ ಉದಯ ಕುಮಾರ್ ಶೆಟ್ಟಿ ಯವರನ್ನು ಅಭಿನಂದಿಸಲಾಯಿತು. ಬಿಜೆಪಿ ಹಿರಿಯ ಮುಖಂಡರಾದ ರಾಜಗೋಪಾಲ್ ರೈ ಯವರು ಮಾತನಾಡುತ್ತಾ ರಸ್ತೆ ಅಗಲೀಕರಣ ಆಗಬೇಕಾದರೆ ಸ್ಥಳೀಯರು ತಮ್ಮ ಜಾಗ ಬಿಟ್ಟು ಕೊಡಬೇಕಾಗಿತ್ತು ಶಾಸಕರು ಅತೀ ನಾಜೂಕಾಗಿ ಅವರ ಮನೋವೊಲಿಸಿ ಅವರಾಗಿಯೇ ಜಾಗ ಬಿಟ್ಟುಕೊಡುವಂತೆ ಮಾಡಿದ್ದಾರೆ ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮ ಜಾಗವನ್ನು ರಸ್ತೆ ಅಗಲೀಕರಣಕ್ಕೆ ಬಿಟ್ಟುಕೊಟ್ಟ ಮಹನೀಯರ ಉಪಕಾರವನ್ನು ಸದಾ ಸ್ಮರಣೀಯ ಎಂದರು.

ಸ್ಥಳೀಯ ಕಾರ್ಪೊರೇಟರ್ ಜಯಲಕ್ಷ್ಮಿ ಶೆಟ್ಟಿ,ಬಿಜೆಪಿ ಹಿರಿಯ ಕಾರ್ಯಕರ್ತರಾದ ಉಮೇಶ್ ಶೆಟ್ಟಿ,ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ರಾಜ್ ರೈ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಅಮಿತ್ ರಾಜ್, ಮಂಡಲದ ಉಪಾಧ್ಯಕ್ಷರಾದ ಕಿರಣ್ ರೈ ,ಶಕ್ತಿ ಕೇಂದ್ರದ ಅದ್ಯಕ್ಷರಾದ ಲೋಕೇಶ್ ಶೆಟ್ಟಿ , ಹಿರಿಯರಾದ ಚಂದ್ರಶೇಕರ್ ಮೂಲ್ಯ, ಸ್ಥಳ ದಾನಿ ಗಳಾದ ಜಯರಾಮ ಕಾರಂದೂರು, ವಸಂತ್ ಆಚಾರ್ಯ,ಬೂತ್ ಅಧ್ಯಕ್ಷರಾದ ಸಂಜೀತ್ ಕುಮಾರ್, ಶ್ರೀಕಾಂತ್ , ಬೂತ್ ಕಾರ್ಯದರ್ಶಿ ಪುರಂದರ ಮತ್ತು ನರೇಶ್ ಆಳ್ವ, ಬಿಜೆಪಿ ಕಾರ್ಯಕರ್ತರಾದ ,ಬಾಬು ಸಾಲಿಯಾನ್,ಸೂರಜ್,ರತ್ನಾಕರ್ ಆಳ್ವ, ಭುವನ್, ದೀಕ್ಷಿತ್, ಉಪಸ್ಥಿತರಿದ್ದರು.

See also  ಬೆಳ್ತಂಗಡಿ: ವಿದ್ಯಾರ್ಥಿ ಸಂಘದ ಚುನಾವಣೆ ನಾಯಕತ್ವ ಬೆಳೆಸಲು ಪ್ರೇರಣೆಯಾಗುತ್ತದೆ ಎಂದ ಹರೀಶ್ ಪೂಂಜ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು