News Kannada
Wednesday, October 04 2023
ಕ್ರೀಡೆ

ಮಂಗಳೂರು: “ಬಲಿದಾನದಿವಸ್ ಟ್ರೋಪಿ” ಕಬಡ್ಡಿ ಪಂದ್ಯಾಟದಲ್ಲಿ ಶಕ್ತಿ ಪಪೂ ಕಾಲೇಜಿಗೆ ಪ್ರಥಮ ಸ್ಥಾನ

Mangaluru: Sakthi College wins first place in Balidaanadivas Trophy Kabaddi
Photo Credit : News Kannada

ಮಂಗಳೂರು,ಮಾ.26: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗವು ಮಂಗಳೂರಿನ ಮಿನಿ ಟೌನ್ ಹಾಲ್‌ನ ಒಳಾಂಗಣದಲ್ಲಿ ಆಯೋಜಿಸಿದ ಬಲಿದಾನ ದಿವಸ್ ಟ್ರೋಪಿ-2023ರ ಅಂತರ ಕಾಲೇಜು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅಂತಿಮ ಸುತ್ತಿನಲ್ಲಿ ಪ್ರತಿಷ್ಠಿತ ಕೆಪಿಟಿ ಕಾಲೇಜು ಕಬಡ್ಡಿ ತಂಡದ ಎದುರುಗಡೆ ಶಕ್ತಿ ಪ.ಪೂ ಕಾಲೇಜಿನ ಕಬಡ್ಡಿ ತಂಡವು ವಿಜಯಿಯಾಗುವುದರ ಮೂಲಕ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ.

ಈ ಸಂದರ್ಭದಲ್ಲಿ ಪ್ರಥಮ ಬಹುಮಾನವಾಗಿ ರೂ.7777/- ನಗದು ಹಾಗೂ ಟ್ರೋಪಿ ನೀಡಿ ತಂಡವನ್ನು ಪುರಸ್ಕರಿಸಲಾಯಿತು. ಶಕ್ತಿ ಪ ಪೂ ಕಾಲೇಜಿನ ಕಬಡ್ಡಿ ತಂಡದ ನಾಯಕರಾಗಿ ಹಾಗೂ ಉತ್ತಮ ದಾಳಿಗಾರನಾಗಿ ಶಿವರಾಜ್ ಮತ್ತು ಸಾರ್ವಂಗೀಣ ಆಟಗಾರನಾಗಿ ಜಾಬಿರ್ ಆಯ್ಕೆಯಾಗಿರುತ್ತಾರೆ. ಈ ಕಬಡ್ಡಿ ತಂಡಕ್ಕೆ ನಿರ್ದೇಶಕರಾಗಿ ಸಂಸ್ಥೆಯ ದೈಹಿಕ ನಿರ್ದೇಶಕರಾದ ಮನೋಹರ ಎಮ್.ಎಸ್ ಮಾರ್ಗದರ್ಶನ ನೀಡಿರುತ್ತಾರೆ.

ಸಂಸ್ಥೆಯ ಪರವಾಗಿ ಆಡಳಿತಾಧಿಕಾರಿ ಡಾ.ಕೆ.ಸಿ. ನಾಯ್ಕ್, ಪ್ರಧಾನ ಸಲಹೆಗಾರ ರಮೇಶ್.ಕೆ, ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲರಾದ ಪ್ರಥ್ವಿರಾಜ್ ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಅಭಿನಂದಿಸಿರುತ್ತಾರೆ.

See also  ಎಲ್ಲರಿಗೂ ಸಮಾನ ಬಹುಮಾನ ನೀಡಿ: ದ್ರಾವಿಡ್ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು