News Kannada
Tuesday, May 30 2023
ಮಂಗಳೂರು

ಮಂಗಳೂರು: ವಾರ್ಡ್, ಗ್ರಾಮಕ್ಕೂ ಸಮಾನ ನ್ಯಾಯ- ಶಾಸಕ ಡಾ. ವೈ ಭರತ್ ಶೆಟ್ಟಿ

Mangaluru: Equal justice for wards and villages: MLA Y Bharath Shetty
Photo Credit : News Kannada

ಮಂಗಳೂರು: ಉತ್ತರ ವಿಧಾನಸಭಾ ಕ್ಷೇತ್ರದ ಮನಪಾ ವಾರ್ಡ್ ಮತ್ತು ಗ್ರಾಮ ಪಂಚಾಯಿತಿಗಳಿಗೆ ಅನುದಾನದ ಅವಶ್ಯಕತೆಗೆ ತಕ್ಕಂತೆ ಸಮಾನ ನ್ಯಾಯ ನೀಡುವ ಮೂಲಕ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಕ್ಷೇತ್ರದ ಮತದಾರರು, ಕಾರ್ಯಕರ್ತರ ನಿರೀಕ್ಷೆಯಂತೆ ಕೆಲಸ ಮಾಡಿದ ಸಂತೃಪ್ತಿಯಿದೆ ಎಂದು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹೇಳಿದರು.

ಮಂಗಳೂರು ನಗರದ ಕದ್ರಿ ಬಿ. 22ನೇ ವಾರ್ಡ್‌ನಲ್ಲಿರುವ ಯೆಯ್ಯಡಿ ಶ್ರೀರಾಮ ಮಂದಿರ ಮುಂಭಾಗ ಕೆರೆ ಉದ್ಘಾಟನೆ ಹಾಗೂ ತಡೆಗೋಡೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕದ್ರಿ 22 ಬಿ ವಾರ್ಡ್‌ನಲ್ಲಿ ಈಗಾಗಲೇ ಬಾರೆಬೈಲು ಮುಖ್ಯರಸ್ತೆ ಕಾಂಕ್ರೀಟೀಕರಣಕ್ಕೆ 25ಲಕ್ಷ ರೂ., ಹಿಲ್ಸ್ ರಸ್ತೆ ಮತ್ತು ಒಳಚರಂಡಿಗೆ 28.50ಲಕ್ಷ ರೂ., ಶ್ರೀರಾಮಮಂದಿರ ಕೆರೆ ನಿರ್ಮಾಣಕ್ಕೆ 52ಲಕ್ಷ ರೂ., ರಸ್ತೆ ನಿರ್ಮಾಣಕ್ಕೆ 1.5ಲಕ್ಷ ರೂ., ಗುರುಬಾಹುಲೇನ್ ರಸ್ತೆ ಕಾಮಗಾರಿ 5.50ಲಕ್ಷ ರೂ., ಜಾರಂದಾಯ ದೈವಸ್ತಾನ ಕೂಡುರಸ್ತೆ ಬದಿ ತೋಡು ನಿರ್ಮಾಣ 15ಲಕ್ಷ ರೂ., ವ್ಯಾಸನಗರ ಮುಖ್ಯ ರಸ್ತೆ 40ಲಕ್ಷ ರೂ., ಒಳಚರಂಡಿ ರಚನೆ ರಚನೆ ಸೇರಿದಂತೆ ಒಟ್ಟು 22ಕೋಟಿ ರೂ. ವೆಚ್ಚದ ಕಾಮಗಾರಿ ಈ ವಾರ್ಡ್‌ನಲ್ಲಾಗಿದೆ. ಕ್ಷೇತ್ರದಲ್ಲಿ ಯಾವುದೇ ರಾಜಕೀಯ ನೋಡದೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇನೆ ಎಂದರು. ಮೇ 22ರಂದು ಯೆಯ್ಯಡಿ ನೂತನ ಶ್ರೀರಾಮಮಂದಿರದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಅದಕ್ಕಿಂತ ಮುನ್ನ ಕೆರೆ ಸಮರ್ಪಣೆ ನಡೆದಿದೆ ಎಂದರು.

ಈ ಸಂದರ್ಭ ಮೇಯರ್ ಜಯಾನಂದ ಅಂಚನ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರು, ಮಂದಿರದ ಅಧ್ಯಕ್ಷರಾದ ಕಮಲಾಕ್ಷ ಬಂಗೇರಾ, ಮುಖಂಡರಾದ ನಾರಾಯಣ್,133 ನೇ ಬೂತಿನ ಅಧ್ಯಕ್ಷರಾದ ಉಮೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿವೇಕಾನಂದ, 132 ನೇ ಬೂತಿನ ಅಧ್ಯಕ್ಷರಾದ ಹರಿಪ್ರಸಾದ್, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂಜಿತ್ ಶೆಟ್ಟಿ, ಸರೋಜಿನಿ, ಪ್ರದೀಪ್, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

See also  ಚಿಕ್ಕಮಗಳೂರು: ಶ್ರೀ ರಂಭಾಪುರಿ ಪೀಠ ದಕ್ಷಿಣ ಭಾರತದ ಕಾಶಿ - ಬಸವರಾಜ್ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು