ಮಂಗಳೂರು: ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾದ ಡಾ. ಎಂ. ವಿಜಯಕುಮಾರ್ ರವರ ಮಾರ್ಗದರ್ಶನದಲ್ಲಿ ಮಾ.26ರ ಭಾನುವಾರದಂದು ಕಥೋಲಿಕಾ ಸ್ತ್ರೀ ಸಂಘಟನೆ ದಕ್ಷಿಣ ವಲಯ ಮತ್ತು ಜುಲೇಖಾ ಯೆನೆಪೋಯ ಇಸ್ಸ್ಟಿಟ್ಯೂಟ್ ಒಫ್ ಒಂಕಾಲೊಜಿ, ಟಾಟಾ ಟ್ರಸ್ಟ್ಸ್ ಇದರ ಸಹಕಾರದಲ್ಲಿ ಹಾಗೂ ಸಾರ್ವಜನಿಕ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಪ್ರಯುಕ್ತ ಮಹಿಳಾ ಆರೋಗ್ಯ ಯೋಗಕ್ಷೇಮ ಜಾಗ್ಯತಿ ಕಾರ್ಯಕ್ರಮದ ಶಿಬಿರವು ನಿತ್ಯಾಧರ ಚರ್ಚ್ ವಠಾರದಲ್ಲಿ ನಡೆಯಿತು.
ವಂ. ಪಾ. ಅಂತೋನಿ ಲಸ್ತಾದೋ ಶಿಬಿರವನ್ನು ಉದ್ಘಾಟಿಸಿಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ಕೋರಿದರು. ಡಾ. ಮಹಮ್ಮದ್ ಗುತ್ತಿಗಾರ್, ಮುಖ್ಯಸ್ಧರು ಸಮಾಜ ಕರ್ಯ ವಿಭಾಗ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ , ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಡಾ. ರಾಜೇಶ್ ಕೃಷ್ಣ ಮತ್ತು ಡಾ. ಲೇಪಾಕ್ಙಿ ಒಂಕಾಲೊಜಿ ವಿಭಾಗದ ವೈದ್ಯರು ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿಯನ್ನು ನೀಡಿದರು.
ಡಾ. ರೇಖಾ. ಪಿ.ಶೆಣ್ಣೆ, ಮುಖ್ಯಸ್ಥರು, ಸಮುದಾಯ ದಂತ ವಿಭಾಗ , ಬಾಯಿಯ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಡಾ. ಐರಿಸ್ ವೇಗನ್, ಸಹಾಯಕ ಪ್ರಾದ್ಯಾಪಕರು, ಸಮಾಜಕರ್ಯ ವಿಭಾಗ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕಂಠದ ಕ್ಯಾನ್ಸರ್ ಬಗ್ಗೆ ಉಪನ್ಯಾಸ ನೀಡಿದರು. ಶಿಬಿರದಲ್ಲಿ 104 ಶಿಬಿರಾರ್ಥಿಗಳು ಪ್ರಯೋಜನವನ್ನು ಪಡೆದರು.