ಸುಳ್ಯ: ತಾಲೂಕಿನ ಮರ್ಕಂಜ ಗ್ರಾಮದ ಅಜ್ಜಿಕಲ್ ಭಾಗದಲ್ಲಿ 3 ಮನೆಗಳಿಗೆ ತೀವ್ರ ಕುಡಿಯುವ ನೀರಿನ ಅಭಾವ ಉಂಟಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತಿದ್ದಂತೆ ಪಂಚಾಯಿತಿ ಸದಸ್ಯ ಮತ್ತು ಅವರ ಆಪ್ತ ಸ್ನೇಹಿತ ರಾಜೇಶ್ ಬೇರಿಕೆ ವಾಹನ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಅಜ್ಜಿಕಲ್ ಎಂಬಲ್ಲಿ ಜಲ ಜೀವನ್ ಮಿಷನ್ ಯೋಜನೆ ಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣವಾಗಿ ಒಂದು ವರ್ಷ ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಇದರ ಪರಿಣಾಮ ಇಂದು ಅಜ್ಜಿಕಲ್, ಕುದುಕುಳಿ, ಪೊಯ್ಯೇಗುಂಡಿ ಬಳ್ಳಾಕನ, ಕಟ್ಟಕೋಡಿ ಪರ್ಪುನಗುಂಡಿ, ಹೊಸೋಲಿಕೆ, ಪೈಲೂರ್ ಈ ಬಾಗದಲ್ಲಿ ಜನ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತಿದ್ದಾರೆ ಎಂದು ಪಂಚಾಯಿತಿ ಸದಸ್ಯರು ಆಗಿರುವ ಚಿತ್ತರಂಜನ್ ಕೋಡಿ ತಿಳಿಸಿದ್ದಾರೆ.
ಮೋಹನ್ ನಾಯ್ಕ್ ರೆಂಜಾಳ , ನಾರಾಯಣ ನಾಯ್ಕ್ ಅಜ್ಜಿಕಲ್ , ಪಂಚಾಯಿತಿ ಸಿಬ್ಬಂದಿ ಲೋಹಿತ್, ಶಶಿಕಾಂತ ಗುಳಿ ಗಮೂಲೆ ರೆಂಜಾಳ ನೀರಿನ ವ್ಯವಸ್ಥೆಗೆ ಸಹಕರಿಸಿದರು.