News Kannada
Friday, June 09 2023
ಮಂಗಳೂರು

ಮಂಗಳೂರು: ವೈಯಕ್ತಿಕ, ವೃತ್ತಿ ಬದುಕಿನ ಒತ್ತಡ ನಿರ್ವಹಣೆಯೂ ಒಂದು ಕಲೆ

womenia program
Photo Credit : News Kannada

ಮಂಗಳೂರು: ನ್ಯೂಸ್ ಕರ್ನಾಟಕದ ದಶಮಾನೋತ್ಸವದ ಅಂಗವಾಗಿ ಥ್ಯಾಂಕ್ಯೂ ಕರ್ನಾಟಕ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಮೈಲಿಗಲ್ಲನ್ನು ಸಾಧಿಸಲು ಸ್ಪಿಯರ್ ಹೆಡ್ ಮೀಡಿಯಾ ಗ್ರೂಪ್ ಅನ್ನು ಬೆಂಬಲಿಸಿದ ವಿಶ್ವದಾದ್ಯಂತದ ಕನ್ನಡಿಗರಿಗೆ ಸಂಸ್ಥೆ ಧನ್ಯವಾದ ಸಲ್ಲಿಸಿದೆ.

ಥ್ಯಾಂಕ್ಯೂ ಕರ್ನಾಟಕ ಸರಣಿಯಡಿ ಪ್ರತಿ ಗುರುವಾರ ಪ್ರಸಾರವಾಗುವ ಮಹಿಳೆಯರು, ಉದ್ಯಮಿಗಳು ಮತ್ತು ಸಾಧಕರನ್ನು ಉತ್ತೇಜಿಸುವ ಕಾರ್ಯಕ್ರ ವುಮೆನ್ಯಾ.

ಮಾರ್ಚ್ 23 ರ ಗುರುವಾರ ಪ್ರಸಾರವಾದ 23 ನೇ ಸಂಚಿಕೆಯ ಅತಿಥಿಯಾಗಿ ಕೌನ್ಸಿಲರ್ ಪ್ರೀತಮ್ ಕಾಮತ್ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನಿರೂಪಕಿ ಅನನ್ಯಾ ಹೆಗ್ಡೆ ನಿರೂಪಿಸಿದರು.

ಈ ಕಾರ್ಯಕ್ರಮವನ್ನು ನ್ಯೂಸ್ ಕರ್ನಾಟಕ.ಕಾಂ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಯಿತು.

ಪ್ರೀತಮ್ ಕಾಮತ್ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, ನೆರೆಹೊರೆ ಮನೆಗೆ ಹೋಗುವುದು, ಅಲ್ಲಿ ಕುಳಿತುಕೊಳ್ಳುವುದು ಮತ್ತು ಆ ಮನೆಯಲ್ಲಿ ಆಹಾರ ಸೇವಿಸುವುದು ನನ್ನ ದಿನಚರಿಯ ಭಾಗವಾಗಿತ್ತು ಎಂದು ಬಾಲ್ಯ ಅನುಭವ ಹಂಚಿಕೊಂಡರು.

ಇಂದಿನ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚಿನ ವಿಚಾರಗಳನ್ನು ತಿಳಿದುಕೊಂಡಿರುತ್ತಾರೆ.  ಆದರೆ ಅವರು ಸ್ಮಾರ್ಟ್ ಫೋನ್ ಗಳಿಂದ ಹೊರಬಂದು ವಾಸ್ತವದಲ್ಲಿ ಬದುಕಬೇಕು ಎಂದು ಪ್ರೀತಮ್ ಕಾಮತ್ ಅಭಿಪ್ರಾಯಪಟ್ಟರು,

ವೃತ್ತಿಜೀವನದ ಹಾದಿಯಲ್ಲಿ “ಏರಿಳಿತಗಳನ್ನು ಹೇಗೆ ನಿಭಾಯಿಸುವುದು” ಎಂಬ ಬಗ್ಗೆ ಮಾತನಾಡಿದ ಅವರು, ಸಕಾರಾತ್ಮಕ ಅಥವಾ  ನಕಾರಾತ್ಮಕ ಎಲ್ಲಾ ರೀತಿಯ ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಅವರು ಹೇಳಿದರು. ವೈಯಕ್ತಿಕ ಜೀವನ ಮತ್ತು ವೃತ್ತಿಪರ ಒತ್ತಡವನ್ನು ನಿರ್ವಹಿಸುವುದು ಒಂದು ಕಲೆ ಎಂದು ಹೇಳಿದರು.

See also  ಬೆಳ್ತಂಗಡಿ: ಅಯೋಧ್ಯೆ ಶ್ರೀರಾಮ ಮಂದಿರದ ಕಾರ್ಯಗಳಿಗೆ ಸಂಕ್ರಾಂತಿ ಬಳಿಕ ವೇಗ ಸಿಗಲಿದೆ- ಪೇಜಾವರ ಶ್ರೀ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು