ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಕೆ. ಸಂತೋಷ್ ಕಾಮತ್ ಅವರು ಸ್ಪರ್ಧಿಸುತ್ತಿದ್ದು ಕ್ಷೇತ್ರದ ಬಗ್ಗೆ ವಿವಿಧೆಡೆ ಕಾರ್ನರ್ ಮೀಟಿಂಗ್ ನಡೆಸುತ್ತಿದ್ದು ನಾಗರಿಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ರಾಜ್ಯದ ಈಗಿನ ಸರಕಾರದ 40% ಕಮಿಷನ್ ದಂಧೆ , ಧರ್ಮದ ಹೆಸರಿನಲ್ಲಿ ಜನರ ನಡುವೆ ಕಂದಕ ಸೃಷ್ಟಿಸುತ್ತಿರುವ ರೀತಿ, ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿಗಳು, ಕಟ್ಟುವುದು – ಕೆಡವುದು – ಮರು ಕಟ್ಟುವುದು ಎಂದು ಸಾರ್ವಜನಿಕರ ತೆರಿಗೆ ಹಣದ ಪೋಲು ಇಂತಹ ಹಲವು ವಿಚಾರಗಳನ್ನು ಜನತೆಯ ಮುಂದೆ ಇಡುವ ಪ್ರಯತ್ನವನ್ನು ಆಮ್ ಆದ್ಮಿ ಪಕ್ಷ ಮಾಡುತ್ತಿದೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ನಾಯಕ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿ ಹಾಗೂ ಪಂಜಾಬಿನಲ್ಲಿ ಈಗಾಗಲೇ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯ ನೀಡುವಲ್ಲಿ ಯಶಸ್ವಿ ಆಗಿರುವ ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲೂ ಜಯಭೇರಿ ಬಾರಿಸಲಿದೆ ಎಂದು ಸಂತೋಷ್ ಕಾಮತ್ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡರಾದ ಜೆಪಿ ರಾವ್, ಪ್ರಸಾದ್ ಬಜೀಲಕೇರಿ, ಜೇರಾರ್ಡ್ ಟವರ್ಸ್, ಜೇಮ್ಸ್ ಡಿಸಾ, ಜೈದೇವ ಶೆಣೈ, ಗ್ಲಾವಿನ್ ಡಿಸೋಜಾ, ಹಮೀದ್ ಅಹಮದ್, ಸ್ಟೀಫನ್ ಪಿಂಟೋ, ವೆಂಕಟೇಶ್ ಬಾಳಿಗಾ ಮುಂತಾದವರು ಅಭ್ಯರ್ಥಿ ಜತೆ ಪ್ರಚಾರದಲ್ಲಿ ತೊಡಗಿಸಿಕೊಂಡರು.