ಸುಳ್ಯ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇದ ಘೋಷಣೆ ಸುಳ್ಯ ವಿಶ್ವಹಿಂದೂಪರಿಷತ್ ಬಜರಂಗದಳ ಸುಳ್ಯ ಪ್ರಖಂಡದಿಂದ ಖಂಡನೆ ವ್ಯಕ್ತವಾಗಿದೆ.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇದಕ್ಕೆ ಮುಂದಾದ ನಿಮಗೆ ಹಿಂದೂ ಸಮಾಜ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದೆ. ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಧ್ಯೇಯ ಧೋರಣೆಯೊಂದಿಗೆ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಮಾದರಿ ಸಂಘಟನೆ. ಈಗಾಗಲೇ ಜೇನುಗೂಡಿಗೆ ಕಲ್ಲು ಎಸಿದಿದ್ದೀರಿ. ಅದರ ಪರಿಣಾಮ ನಿಮಗೆ ಕೂಡಲೇ ಆ ಆಂಜೆನೇಯ ಹಾಗೂ ಶ್ರೀರಾಮನ ಶಾಪ ತಟ್ಟಿಯೇ ತಟ್ಟುತದೆ. ಇಂಥ ಪ್ರಣಾಳಿಕೆ ಯನ್ನು ಸುಳ್ಯ ಪ್ರಖಂಡ ಕಡೆಯಿಂದ ನಾವು ಖಂಡಿಸುತ್ತೇವೆ ಎಂದು ಭಜರಂಗದಳ ಸುಳ್ಯ ಪ್ರಖಂಡ ತಿಳಿಸಿದೆ.