News Kannada
Thursday, June 01 2023
ಮಂಗಳೂರು

ಬಂಟ್ವಾಳ‌: ಮತಯಾಚನೆ ನಡೆಸಿದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್

Bantwal: BJP candidate Rajesh Naik campaigned for votes.
Photo Credit : News Kannada

ಬಂಟ್ವಾಳ‌: ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಕರೋಪಾಡಿ ಮತ್ತು ಕನ್ಯಾನ ಗ್ರಾಮದ ವಿವಿಧ ಭಾಗಗಳಿಗೆ ಮತ್ತು ಎಸ್.ಸಿ‌.ಕಾಲೋನಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.

ಬಳಿಕ ಕಾರ್ಯಕರ್ತರ ಚುನಾವಣಾ ರಣರಂಗದಲ್ಲಿ ತೊಡಗಿಸಿಕೊಳ್ಳಬೇಕಾದ ರೀತಿ ಕೆಲವೊಂದು ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.

ಹಿಂದೂ ಧರ್ಮದ ರಕ್ಷಣೆಯ ಜವಬ್ದಾರಿ ಹೊಂದಿರುವ ಸಂಘಟನೆಯಲ್ಲಿ ಒಂದಾದ ಭಜರಂಗದಳದ ನಿಷೇಧ ಮಾಡಲು ಹೊರಟಿರುವ ಕಾಂಗ್ರೆಸ್ ನ ಮನಸ್ಥಿತಿಯನ್ನು ನಾವು ಆಲೋಚಿಬೇಕಾದ ಕಾಲಘಟ್ಟದಲ್ಲಿ ಇದ್ದೇವೆ ಎಂದು ಅವರು ತಿಳಿಸಿದರು.
ನಿರಂತರವಾಗಿ ಹಿಂದೂ ಧರ್ಮದ ಮೇಲೆ ದಾಳಿ ಮಾಡುತ್ತಾ ಬಂದಿರುವ ಕಾಂಗ್ರೆಸ್ ನ ಅಸಲಿ ಬುದ್ದಿ ಬಹಿರಂಗಗೊಂಡಿದೆ.

ಗೋಕಳ್ಳತನ , ಅತ್ಯಾಚಾರ, ಮತಾಂತರ, ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಬಂದಿರುವ ಕಾಂಗ್ರೆಸ್ ಗೆ ಈ ಬಾರಿ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸದಸ್ಯರಾದ ರಘನಾಥ ಶೆಟ್ಟಿ ಪಟ್ಲ, ರಘುರಾಮ ಶೆಟ್ಟಿ, ಧರ್ಣಮ್ಮ, ಜೆ.ಪಿ.ಗೌಡ, ಮನೋಜ್ ಬನಾರಿ, ಪ್ರಮುಖರಾದ ಯೋಗೀಶ್ ಕುಳ, ಶಿವಪ್ರಸಾದ್ ಶೆಟ್ಟಿ, ವಿನೋದ್ ಶೆಟ್ಟಿ ,ಹರೀಶ್ ಬೇಡಗುಡ್ಡೆ, ಉದಯರಮಣ ಭಟ್,ಕುಮಾರ್ ಭಟ್, ರಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕನ್ಯಾನ ಭಾರತಿ ಸೇವಾಶ್ರಮ, ಶ್ರೀ ಕ್ಷೇತ್ರ ಕಣಿಯೂರು ಗೆ ಬೇಟಿ ನೀಡಿ ಶ್ರೀ ಮಹಾಬಲ ಸ್ವಾಮೀಜಿ ಯವರ ಆಶೀರ್ವಾದ ಪಡೆದರು.

See also  ಸಮಯಪಾಲನೆಗೆ ಹೆಚ್ಚಿನ ಒತ್ತು ನೀಡಲು ಜಿಲ್ಲಾಧಿಕಾರಿ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು