News Kannada
Thursday, June 01 2023
ಮಂಗಳೂರು

ಬೆಳ್ತಂಗಡಿ: ಗಡಾಯಿಕಲ್ಲಿನಲ್ಲಿ ಸಿಡಿಲು ಬಡಿದು ಬೆಂಕಿ, ಅರಣ್ಯ ಇಲಾಖೆಯಿಂದ ಪರಿಶೀಲನೆ

Fire breaks out due to lightning in Gadaikallu
Photo Credit : News Kannada

ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾದ ಗಡಾಯಿಕಲ್ಲಿನಲ್ಲಿ ಸಿಡಿಲು ಬಡಿದು ಬೆಂಕಿ ಉಂಟಾದ ಘಟನೆ ಮಂಗಳವಾರ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ಬುಧವಾರ ಪರಿಶೀಲನೆ ನಡೆಸಲಾಯಿತು.

ಆರ್‌ ಎಫ್‌ ಒ ಸ್ವಾತಿ, ಅವರ ನಿರ್ದೇಶನದಂತೆ ಡಿ ಆರ್ ಎಫ್ ಓ ಕಿರಣ್ ಪಾಟೀಲ್, ಗಸ್ತು ಪಾಲಕರಾದ ಹೇಮಂತ್ ಹಾಗೂ ರಾಘವೇಂದ್ರ ಗಡಾಯಿಕಲ್ಲಿಗೆ ತೆರಳಿ ಪರಿಶೀಲನೆ ನಡೆಸಿದರು. ಮಂಗಳವಾರ ಬೆಂಕಿ ಉಂಟಾದ ತಕ್ಷಣ ಪರಿಶೀಲನೆ ನಡೆಸಲಾಗಿದ್ದರು ಕತ್ತಲು ಹಾಗೂ ಮೋಡಕವಿದ ವಾತಾವರಣದ ಕಾರಣ ಅದು ಪೂರ್ಣಗೊಂಡಿರಲಿಲ್ಲ.

ಗಡಾಯಿಕಲ್ಲಿನ ಒಂದು ಪ್ರದೇಶದ ಎರಡು ಮೂರು ಕಡೆಗಳಲ್ಲಿ ಸಿಡಿಲಿನ ಪರಿಣಾಮ ಅಲ್ಪ ಪ್ರಮಾಣದಲ್ಲಿ ಬೆಂಕಿ ಉತ್ಪತ್ತಿಯಾಗಿ ಅದು ಒಣಹುಲ್ಲನ್ನು ಆವರಿಸಿದೆ.ತಕ್ಷಣ ಮಳೆ ಬಂದ ಕಾರಣ ಬೆಂಕಿ ಹೆಚ್ಚಿನ ಭಾಗಕ್ಕೆ ಪಸರಿಸಿಲ್ಲ. ಬೆಂಕಿಯು ಸಂಪೂರ್ಣ ನಂದಿದ್ದು ಸಿಡಿಲಿನಿಂದ ಗಡಾಯಿಕಲ್ಲಿನ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

See also  ಮಂಗಳೂರು: ಬಕ್ರಿದ್ ಹಬ್ಬದಂದು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಆಯುಕ್ತರಿಗೆ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು