ಬೆಳ್ತಂಗಡಿ: ಸಂಸದ ಸ್ಥಾನವನ್ಬು ಕೋರ್ಟು ಅನರ್ಹಗೊಳಿಸಿದ ಬಳಿಕ ಹತಾಶರಾಗಿ ವಿವಿಧ ಹೇಳಿಕೆ ಕೊಡುವ ಕಾಂಗ್ರೆಸ್ ಮುಖಂಡರು ಭಾರತವನ್ನು ಇಸ್ಲಾಂ ದೇಶ ಮಾಡಲು ಹೊರಟಿದ್ದಾರೆ. ರಾಹುಲ್ ಎಂಬ ನಕಲಿ ಗಾಂದಿಯಿಂದ ದೇಶಕ್ಕೆ ಅಪಾಯ ಖಚಿತ. ಅದಕ್ಕಾಗಿ ಭಾರತದ ಹಿಂದುಗಳಿಗೆ ರಕ್ಷಣೆ ಕೊಡಲು ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಅದಿಕಾರಕ್ಕೆ ಬರಲು ಎಲ್ಲಾ ಕಾರ್ಯಕರ್ತರು ಇಂದಿನಿಂದಲೇ ಶ್ರಮಿಸಬೇಕು ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದರು.
ಅಚರು ಶುಕ್ರವಾರ ಲಾಯಿಲದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಬೆಯನ್ನು ಉದ್ಘಾಟಿಸಿ ಮಾತನಾಡಿ ಬಿಜೆಪಿ ಪಕ್ಷದ ಅಬಿವೃದ್ಧಿ ,ಸಂಘಟನೆ, ಪಾರದರ್ಶಕತೆ ನೋಡಿ ಇದನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಜನರನ್ನು ಸುಳ್ಳು ಭಾಗ್ಯಗಳನ್ಬು ನೀಡಿ ಮೋಸದಿಂದ ಅಧಿಕಾರಕ್ಕೆ ಬಂದಿದೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಮುಳುವಾಗಲಿದ್ದು ಭರವಸೆ ಈಡೇರಿಸಲು ನೆಪವೊಡ್ಡಿದರೆ ಜನರೆ ಕಾಂಗ್ರೆಸ್ ಗೆ ಮುಂದಿನ ಲೋಕ ಸಭಾ ಚುಣಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.
ಬಿಜೆಪಿ ವಿರುದ್ದ 40% ಕಮಿಷನ್ ಅರೋಪ ಮಾಡಿದ ಕಾಂಗ್ರೆಸ್ ಈಗ ಅದಿಕಾರಕ್ಕೆ ಬಂದಿದೆ.ಸೂಕ್ತ ತನಿಕೆ ನಡೆಸಿ ಅರೋಪ ಸಾಬಿತಾದರೆ ಶಿಕ್ಷೆ ನೀಡಿ ಇಲ್ಲವಾದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಎಂದರು. ಬಿಜೆಪಿ ಮಂಡಲ ಅದ್ಯಕ್ಷ ಜಯಂತ್ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿ ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬೂತ್ , ಶಕ್ತಿಕೇಂದ್ರ ಬಲಗೊಳಿಸುವ ಅಗತ್ಯವಿದ್ದು ಅದಕ್ಕಾಗಿ ಕಾರ್ಯಕಾರಿಣಿ ಸಭೆಗೆ ಮಹತ್ವ ನೀಡಬೇಕಾಗಿದೆ ಎಂದರು.
ವಿದಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹನಾಯಕ್, ಮುಖಂಡ ಸುದೀರ್ ಶೆಟ್ಡಿ ಕಣ್ಣೂರು ಉಪಸ್ಥಿತರಿದ್ದರು.