ಮಂಗಳೂರು: ಬಿಜೆಪಿಯು 2018ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ 104 ಸ್ಥಾನ, ದ.ಕ. ಜಿಲ್ಲೆಯಲ್ಲಿ 8ರಲ್ಲಿ 7 ಸ್ಥಾನಗಳನ್ನು ಗೆದ್ದಿತ್ತು. ಆ ಬಾರಿ ದ.ಕ. ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ವೇಳೆ ನೇತೃತ್ವ ವಹಿಸಿದ್ದು ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲು. ಆಗ ಅವರ ತೀರ್ಮಾನಗಳು ಯಶ ಕಂಡಿದ್ದವು. ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರೂ ಯಶಸ್ಸು ಕೈ ಹಿಡಿಯಲಿಲ್ಲ. ರಾಜ್ಯದಲ್ಲಿ 65 ಸ್ಥಾನಕ್ಕೆ ಕುಸಿತ ಕಂಡಿದ್ದರೆ, ಅವರ ತವರು ಜಿಲ್ಲೆಯಲ್ಲೂ, ತವರು ತಾಲೂಕಿನಲ್ಲೂ ವಿಫಲರಾದರು.
ಸಂಸದರ ವಿರುದ್ಧ ಟ್ರೋಲ್ಗಳ ಸುರಿಮಳೆ: ಸಾಮಾಜಿಕ ಜಾಲತಾಣಗಳಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಿವಿಧ ರೀತಿಯ ಟ್ರೋಲ್ಗಳು ಹರಿದಾಡುತ್ತಿವೆ. ನಳಿನ್ ಅವರ ಭಾಷಣ ಕ್ಲಿಪ್ಗಳನ್ನು ಬಳಸಿಕೊಂಡು ಅದಕ್ಕೆ ಸಂಗೀತ ಜೋಡಿಸಿ ವಿವಿಧ ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ.