ಪುತ್ತೂರು: ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಹೈಡ್ರಾಮ ನಡೆದಿದೆ. ಬಿಜೆಪಿ ಕಾರ್ಯಕರ್ತರನ್ನು ಅರುಣ್ ಕುಮಾರ್ ಪುತ್ತಿಲ ಅವರ ಕಾರ್ಯಕರ್ತರು ತಳ್ಳಿದ ಘಟನೆ ನಡೆದಿದೆ.
ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಸಂಘಟನೆ ಕಾರ್ಯಕರ್ತರ ಆರೋಗ್ಯ ವಿಚಾರಿಸಲು ಬಸವರಾಜ್ ಪಾಟೀಲ್ ಯತ್ನಾಲ್ ಬಂದಾಗ ಘಟನೆ ನಡೆದಿದೆ.
ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ನೋಡಬೇಡಿ ಎಂದು ಆಸ್ಪತ್ರೆಯ ಒಳಗೆ ಹೋಗದಂತೆ ಪುತ್ತಿಲ ಕಾರ್ಯಕರ್ತರು ದೂರ ಇರುವಂತೆ ತಳ್ಳಿದ್ದಾರೆ. ಈ ವೇಳೆ ಬಸರಾಜ್ ಪಾಟೀಲ್ ಯತ್ನಲ್ ಗೆ ಮಾತ್ರ ಆಸ್ಪತ್ರೆ ಒಳಗಡೆ ನೋಡಲು ಪುತ್ತಿಲ ಟೀಂ ಎಂಟ್ರಿ ನೀಡಿದ್ದಾರೆ.