ಮಂಗಳೂರು: ಹಿಂದೆ ಕರ್ನಾಟಕ ರಾಜ್ಯೋತ್ಸವ ಸಂಧರ್ಭ ವಿವಿಧ ನಾಯಕರ ಟ್ಯಾಬ್ಲೋ ಪ್ರದರ್ಶನ ವೇಳೆ ಬ್ರಹ್ಮಶ್ರೀ ಪರಮ ಪೂಜ್ಯ ನಾರಾಯಣ ಗುರುಗಳ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ನೀಡದ ರಾಜ್ಯ ಬಿಜೆಪಿ ಸರ್ಕಾರ, ಹಿಂದುಳಿದ ವಿಭಾಗಗಳ ಯುವಕರನ್ನು ಕೋಮುವಾದದ ಅಮಲಿನಲ್ಲಿ ಮುಳುಗಿಸಿ, ಜೈಲು, ಕೋರ್ಟ, ಕಛೇರಿಗೆ ಅಲೆದಾಡಿಸಿ, ರಾಜಕೀಯ ಲಾಭಕ್ಕಾಗಿ ಬಲಸುವ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ಬಗ್ಗೆ ಯುವಕರು ಈ ಬಾರಿ ಮನದಲ್ಲಿಟ್ಟು ಯೋಚಿಸಿ ಮತ ನೀಡಬೇಕೆಂದು ಕರ್ನಾಟಕ ರಾಜ್ಯ ಜನತಾದಳ ಹಿಂದುಳಿದ ವಿಭಾಗಗಳ ಉಪಾಧ್ಯಕ್ಷ ಯಾದವ ಕೋಟ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಸುಮತಿ ಹೆಗ್ಡೆಯವರೊಂದಿಗೆ ಮಂಗಳಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಈ ಸಂಧರ್ಭ ರಾಜ್ಯ ಜೆಡಿಎಸ್ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ , ರಾಜ್ಯ ಯುವ ಜನತಾದಳ ಮುಖಂಡ ಶ್ರೀನಾಥ್ ರೈ ,ಅಲ್ತಾಫ್ ತುಂಬೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.