ಚಾರ್ಮಾಡಿ ಘಾಟಿ: 7ನೇ ತಿರುವಿನಲ್ಲಿ ಅರುಣಾಚಲ ಪ್ರದೇಶ ನೋಂದಣಿಯ ಸ್ಲೀಪರ್ ಬಸ್ ತಿರುವಿನಲ್ಲಿ ಸಿಲುಕಿದ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನ ಗಳು ಸಾಲುಗಟ್ಟಿ ನಿಲ್ಲಬೇಕಾಯಿತು.
ಚಿಕ್ಕಮಗಳೂರಿನ ಬೈಕ್ ಸವಾರ ವಿದ್ಯಾರ್ಥಿ ಡೇನಿಯಲ್ ಹಾಗೂ ಕೆಲವು ವಾಹನ ಸವಾರರು ಸೇರಿ ಏಕ ಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.ಆದರೂ ಅನೇಕ ಹೊತ್ತು ಬಸ್ ಲಾರಿ ಮೊದಲಾದ ವಾಹನಗಳು ಸಂಚರಿಸಲು ಪರದಾಟ ನಡೆಸಿದವು.ಭಾನುವಾರವಾದ ಕಾರಣ ಘಾಟಿಯಲ್ಲಿ ವಾಹನ ಸಂಚಾರವು ಹೆಚ್ಚಿತ್ತು.
ಚಾರ್ಮಾಡಿಯಲ್ಲಿ ಸ್ಲೀಪರ್ ಬಸ್ ಸಂಚಾರಕ್ಕೆ ಅನುಮತಿ ಇಲ್ಲದಿದ್ದರೂ,ಕೊಟ್ಟಿಗೆಹಾರ ಕಡೆ ಹೋಗಲು ಈ ಬಸ್ ಚಾರ್ಮಾಡಿ ಪೊಲೀಸ್ ಗೇಟ್ ಮೂಲಕವೇ ಸಂಚಾರ ನಡೆಸಿದೆ.