ಮಂಗಳೂರು: ಜೆಪ್ಪಿನ ಮೊಗರು ವಾರ್ಡಿನ ವ್ಯಾಪ್ತಿಯಲ್ಲಿರುವ ಆದಂ ಕುದ್ರು ಪ್ರದೇಶಕ್ಕೆ ಮಂಗಳವಾರ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಪ್ರೇಮ್ ಚಂದ್,ವಾರ್ಡ್ ಅಧ್ಯಕ್ಷ ಸುಧಾಕರ್ ಜೆ., ಹಾಗೂ ಪ್ರಮುಖರಾದ ಹರ್ಬಟ್ ಡಿಸೋಜಾ, ಸುಧೀರ್ ಕಡೆಕಾರ್, ಶ್ರೀಧರ್ ರಾಜ್, ನವೀನ್ ಸ್ಟೀವನ್, ಓಸ್ವಲ್ಡ್ ಡಿಸೋಜಾ, ಜೋಸೆಫ್ ಡಿಸೋಜಾ, ಸುರೇಶ್ ಶೆಟ್ಟಿ, ಅಮರನಾಥ್ ಭಂಡಾರಿ, ಅನಿಲ್ ಡಿಸೋಜಾ, ಮ್ಯಾಕ್ಸಿ ಡಿಸೋಜಾ, ಪಾಟ್ರಿಕ್ ಡಿಸೋಜಾ, ವಾಲ್ಟರ್ ಡಿಸೋಜಾ, ವಿನಯ್ ಮಸ್ಕರೇನಸ್, ಕೃತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.