ಮಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಮತದಾರರಿಗೆ ನೀಡಿರುವ ವಾಗ್ದಾನದಂತೆ, ಜಾರಿಗೆ ತಂದಿರುವ ಗೃಹ ಜ್ಯೋತಿ 200 ಯೂನಿಟ್ ಉಚಿತ ವಿದ್ಯುತ್ ನೀಡುವೆ, ರಾಜ್ಯದಲ್ಲಿನ 2.14 ಕೋಟಿ ಗೃಹಬಳಕೆಯ ಫಲಾನುಭವಿಗಳಿಗೆ ಯೋಜನೆ ಮುಟ್ಟಿಸಲು ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧರಾಗಿರಬೇಕು.
ಈ ಯೋಜನೆ ಜಾರಿಗೆ ತರಲು ಉತ್ತಮ ಕಾರ್ಯಪಡೆ ನೇಮಿಸಿ ಕಾರ್ಯಗತ ವಹಿಸಬೇಕೆಂದು, ಯಾವುದೇ ಲೋಪವಿಲ್ಲದೆ ಆಗುವಂತೆ ಎಚ್ಚರಿಕೆ ವಹಿಸಬೇಕು ಮತ್ತು ಗ್ರಾಹಕರ ಅನುಮಾನಗಳಿಗೆ ಸರಿಯಾದ ಹೇಳಿಕೆ ಮೂಲಕ ಒತ್ತಾಯಿಸಬೇಕೆಂದು ಮೀಟರ್ ನಂಬರ್ ಜೋಡಣೆ ಸರಿಯಾಗಿ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಕೆ ಪಿ ಸಿ ಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಐವನ್ ಡಿಸೋಜ ರವರ ನೇತೃತ್ವದ ಯೋಗವು ಮೆಸ್ಕಾಂ ಎಂ ಡಿ ಎಚ್ ಜಿ ರಮೇಶ್ ರವರನ್ನು ಭೇಟಿ ಮಾಡಿ ಚರ್ಚಿಸಲಾಯಿತು.
ಈ ನಿಯೋಗದಲ್ಲಿ , ಮಾಜಿ ಉಪಮೇಯರ್ ಮೊಹಮ್ಮದ್ ಕುಂಜತ್ ಬೈಲ್, ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಸಲೀಂ, ನಗರ ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಬಿ ಸಾಲಿಯನ್, ವಿವೇಕ್ ರಾಜ್ ಪೂಜಾರಿ, ಆಲಿಸ್ಟೆರ್ ಡಿಕೂನ, ಭಾಸ್ಕರ್ ರಾವ್ ಮನುರಾಜ್, ಹಬೀಬುಲ್ಲ ಕಣ್ಣೂರ್, ವಿಕಾಶ್ ಶೆಟ್ಟಿ, ಹುಸೈನ್ ಕೂಳೂರು ಸಿರಾಜ್ ಬಜ್ಪೆ, ಯಶವಂತ ಪ್ರಭು, ನಿಸಾರ್ ಬಜ್ಪೆ, ಮಹೇಶ್ ಕೊಡಿಕಲ್ ಹಾಗೂ ಇತರರು ಉಪಸ್ಥಿತರಿದ್ದರು.