ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜೆ. ಆರ್. ಲೋಬೊ ರವರ ಪರವಾಗಿ ಚುನಾವಣೆ ಪ್ರಚಾರ ಸಭೆಯು ನಗರದ ಉರ್ವಾ ದಡ್ಡಲ್ ಕಾಡ್ ಬಳಿಯಲ್ಲಿ ಮೇ 4 ರಂದು ಸಂಜೆ ನಡೆಯಿತು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿಯವರು ಈ ದೇಶದಲ್ಲಿನ ಬಹುಪಾಲು ಪದವೀಧರರು ಉದ್ಯೋಗ, ಶಿಕ್ಷಣ, ಬದುಕು, ಹರಸಿಕೊಂಡು ವಿದೇಶಗಳಿಗೆ ವಲಸೆ ಹೋಗುತ್ತಲಿದ್ದಾರೆ.
ಯುವಜನತೆಯು ಈ ಸಮಸ್ಯೆಯಿಂದ ಹೊರ ಬರುವಂತಾಗಲು ಇಲ್ಲಿ ಉದ್ಯೋಗ ಸೃಷ್ಟಿಯ ಅವಶ್ಯಕತೆ ಯಿದೆ ಎಂದರು.
ʼಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತುಂಬೆ ವೆಂಟೆಡ್ ಡ್ಯಾಮ್ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ,ಎಡಿಬಿ ಯೋಜನೆಯ ಸಮರ್ಪಕ ಬಳಕೆ, ಪೆಟ್ರೋಲ್ ಕಂಪನಿಗೆ ಉತ್ತೇಜನ, ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ಹಲವು ಮಹತ್ತರವಾದ ಯೋಜನೆಗಳನ್ನು ತಂದಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕಾಗಿದೆ.
ಡಾ.ಮನಮೋಹನ ಸಿಂಗ್, ಇಂದಿರಾ ಗಾಂಧಿ,ರಾಜೀವ್ ಗಾಂಧಿ ಮುಂತಾದ ಮಹಾನ್ ರಾಜಕೀಯ ಮುತ್ಸದ್ದಿಗಳು ಈ ದೇಶಕ್ಕೆ ನೀಡಿರುವಂತಹ ಕೊಡುಗೆಯ ಬಗ್ಗೆ ಕಿಂಚಿತ್ತು ಅರಿವಿಲ್ಲದ ಬಿ.ಜೆ.ಪಿಗರಿಗೆ ಕಾಂಗ್ರೆಸ್ ಪಕ್ಷವು ನೀಡಿರುವ ಕೊಡುಗೆಗಳನ್ನು ಪ್ರಶ್ನಿಸಲು ಅರ್ಹತೆ ಇಲ್ಲ. ಗ್ಯಾಸ್ ಸೇರಿದಂತೆ ಗ್ರಹ ಬಳಕೆಯ ವಸ್ತುಗಳ ಬೆಲೆಯು ಗಗನಕ್ಕೇರಿರುವುದರಿಂದಾಗಿ ಜನಸಾಮಾನ್ಯರು ಭವಣೆ ಪಡುವಂತಾಗಿದೆ. ಈ ಪರಿಸ್ಥಿತಿಯಿಂದ ಹೊರಬರಲು ತಾವೆಲ್ಲರೂ ಜೆ.ಆರ್. ಲೋಬೊ ರವರ ಹಸ್ತದ ಗುರುತಿಗೆ ಮತ ನೀಡುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಸಾರ್ವಜನಿಕ ಸಭೆಯಲ್ಲಿ ಶ್ರೀ ವೀರಪ್ಪ ಮೊಯ್ಲಿಯವರು ಲೋಬೋ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಸುನಿಲ್ ಬಜಿಲಕೇರಿ ಯವರು ವೀರಪ್ಪ ಮೊಯಿಲಿ ಯವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಎಐಸಿಸಿ ಪ್ರದಾನ ಕಾರ್ಯದರ್ಶಿ, ಮಾಜಿ ಕೇಂದ್ರ ಸಚಿವ ತಾರೀಖ್ ಅನ್ವರ್, ಉತ್ತರ ಖಂಡದ ಶಾಸಕ ಭುವನ್, ಮಾಜಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ, ಜಿಲ್ಲಾ ಕಾಂಗ್ರೆಸ್ ಮಾಜಿ ಉಸ್ತುವಾರಿ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಬಿ.ಸಾಲಿಯಾನ್, ಮಾಜಿ ಮೇಯರ್ ಶಶಿಧರ ಹೆಗ್ಡೆ,ಜಿಲ್ಲಾ ಒಬಿಸಿ ಅಧ್ಯಕ್ಷ ವಿಶ್ವಾಸ್ ದಾಸ್, ಯುವ ಕಾಂಗ್ರೇಸಿನ ಮೆರಿಲ್ ರೇಗೋ, ಮಾಜಿ ಉಪ ಮೇಯರ್ .ರಜನೀಶ್ ಕಾಪಿಕಾಡ್, ಮಾಜಿ ಮೇಯರ್ ಭಾಸ್ಕರ್ ಕೆ., ಶೇಖರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.