News Karnataka Kannada
Thursday, April 25 2024
ಮಂಗಳೂರು

ಕಾಂಗ್ರೆಸ್‌ ಪ್ರತಿಭಟಿಸಿಲ್ಲ, ಜನರಿಗೆ ಸತ್ಯ ಗೊತ್ತಿದೆ: ಕಲ್ಲಡ್ಕ ಭಟ್‌ಗೆ ಮುತಾಲಿಕ್‌ ಟಾಂಗ್‌

Congress has not protested, people know the truth: Muthalik Tong to Kalladka Bhatt
Photo Credit :

ಪುತ್ತೂರು: ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದ್ದು ಸಂತ್ರಸ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪೊಲೀಸರ ಥರ್ಡ್ ಡಿಗ್ರಿ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಹಿಂದೂ ಸಂಘಟನೆ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಘಟನೆಯನ್ನ ಉಗ್ರವಾಗಿ ಖಂಡಿಸುತ್ತೇನೆ ಎಂದರು. ಪ್ರಕರಣದ ಮೂಲ‌ ವ್ಯಕ್ತಿ ಡಿವೈಎಸ್ಪಿ, ಅವರನ್ನ ಸಸ್ಪೆಂಡ್ ಮಾಡಬೇಕು. ಹಾಗಾಗಿ‌ ಹೊಸ ಸರ್ಕಾರದ ಗೃಹಮಂತ್ರಿಗಳಿಗೆ ಶ್ರೀರಾಮ ಸೇನೆ ಪುತ್ತೂರಿನ ಘಟನೆ ವಿರುದ್ಧ ಮನವಿ ನೀಡಲಾಗುವುದು. ಘಟನೆಗೆ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ಕಾಂಗ್ರೆಸ್ ಮೇಲೆ ಆರೋಪ ಹೊರಿಸಿದ ವಿಚಾರವಾಗಿ ಮಾತನಾಡಿದ ಅವರು ಪುತ್ತೂರಿನಲ್ಲಿ ನಡೆದ ಈ ಘಟನೆ ಕುರಿತು ಕಾಂಗ್ರೆಸ್ ಮೇಲೆ ಆರೋಪ ಮಾಡುವುದು ತಪ್ಪು. ಪ್ರಭಾಕರ್ ಭಟ್ ಅವರ ಮಾತು ಒಪ್ಪುವಂತಹುದಲ್ಲ. ಬಿಜೆಪಿ ಪರಾಜಿತ ಅಭ್ಯರ್ಥಿ ಮತ್ತು ಶಾಸಕರು ಹಿಂದು ಕಾರ್ಯಕರ್ತರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅವರೇ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಕೂಗಿದ್ದಾರೆ.

ಕಾಂಗ್ರೆಸ್‌ ಪ್ರತಿಭಟನೆ ನಡೆಸಿಲ್ಲ. ಈ ಪ್ರಕರಣವನ್ನ ಮುಚ್ಚಿ ಹಾಕುವಂತಹ ಕೆಲಸ ಮಾಡಬೇಡಿ ಎಂದರು. ತಪ್ಪನ್ನು ಒಪ್ಪಿಕೊಂಡು ಸರಿಪಡಿಸುವ ಕೆಲಸ ಮಾಡಿ ಎಂದರು. ಜನರಿಗೆ ಸತ್ಯ‌ಗೊತ್ತಿದೆ, ಇನ್ನೇನೋ ಹೇಳುವುದಕ್ಕೆ ಹೋಗಿ ಮತ್ತೆ ಅಪಹಾಸ್ಯಕ್ಕೀಡಾಗಬೇಡಿ ಎಂದರು. ದೌರ್ಜನ್ಯಕ್ಕೊಳಗಾದ ಯುವಕರು ಬಾಲ್ಯದಿಂದಲೇ ಸ್ವಯಂ ಸೇವಕರು. ಹಿಂದುತ್ವಕ್ಕಾಗಿ ಯಾವುದೇ ಕಾರ್ಯಕ್ಕೆ ಸಿದ್ಧವಾದಂತಹ ಕಾರ್ಯಕರ್ತರು. ಅಂತಹ ವ್ಯಕ್ತಿಗಳ ಮೇಲೇ ಬ್ರಿಟಿಷ್‌ ಮಾದರಿ ಕ್ರೌರ್ಯ ಮೆರೆದಿದ್ದು ತಪ್ಪು. ಅಷ್ಟಕ್ಕೂ ಕಾರ್ಯಕರ್ತರು ಮಾಡಿದ ತಪ್ಪಾದರೂ ಏನು ಎಂದು ಪ್ರಶ್ನಿಸಿದರು. ಚಪ್ಪಲಿ ಹಾರ ಬ್ಯಾನರ್ ಹಾಕಿದ್ದಾರೆ ಎಂಬುದು ಅಪರಾಧವಾದವೇ ? ಸಾರ್ವಜನಿಕ ಜೀವನದಲ್ಲಿರುವಾಗ ಹೂವಿನ ಹಾರ ಹಾಕಿಕೊಳ್ಳಲು ಸಿದ್ಧರಿರುವಂತೆಯೇ ಚಪ್ಪಲಿ ಹಾರ ಹಾಕಿಸಿಕೊಳ್ಳಲು ಸಿದ್ಧರಿರಬೇಕು. ಮಾನ, ಅಪಮಾನ, ಸನ್ಮಾನವನ್ನು ಸಮನಾಗಿ ಸ್ವೀಕರಿಸಬೇಕು ಎಂದರು. ಯಾಕೇ ಬ್ಯಾನರ್ ಚಪ್ಪಲಿ ಹಾರ ಹಾಕಿದ್ದಾರೇ ಎಂಬ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು ಎಂದರು. ಅದು‌ ಬಿಟ್ಟು ಕಾರ್ಯಕರ್ತರ ಮೇಲೆ‌ ಮಾಡಿಸಿದ ದೌರ್ಜನ್ಯಕ್ಕೆ ಕ್ಷಮೆ‌ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು