News Kannada
Monday, December 11 2023
ಮಂಗಳೂರು

ಜಿಲ್ಲಾ ಕಾರಾಗೃಹದ ಕೈದಿಗಳಿಗಾಗಿ ಮನಪರಿವರ್ತನಾ ಶಿಬಿರ

Conversion camp for inmates of district jail
Photo Credit : News Kannada

ಕೊಡಿಯಾಲ್ ಬೈಲ್: ನ್ಯೂಸ್ ಕರ್ನಾಟಕ ಇದರ ಸಹಯೋಗದೊಂದಿಗೆ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು,ರೋಟರಿ ಕ್ಲಬ್ ಆಫ್ ಮಂಗಳೂರು ಹಿಲ್ಸ್ ಸೈಡ್, ಲಯನ್ಸ್ ಅಂಡ್ ಲಿಯೊ ಕ್ಲಬ್ ಆಫ್ ಮಂಗಳೂರು ಕೊಡಿಯಲ್‌ ಬೈಲ್‌, ರೋಟರಿ ಕ್ಲಬ್ ಆಫ್ ಮಂಗಳೂರು ಮೆಟ್ರೋ, ಇದರ ಸಹಯೋಗದೊಂದಿಗೆ ಮನಪರಿವರ್ತನ ಶಿಬಿರ ಜಿಲ್ಲಾ ಕಾರಾಗೃಹ ಕೋಡಿಯಾಲ್ ಬೈಲ್ ಮಂಗಳೂರಿನಲ್ಲಿ ಇಂದು ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ಜರುಗಿತು.

ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ, ರೋಟರಿ ಕ್ಲಬ್ ಆಫ್ ಮಂಗಳೂರು ಮೆಟ್ರೋ, ಇದರ ಅಧ್ಯಕ್ಷರಾದ ರಜನಿ ಭಟ್ ಅವರು “ಗಣೇಶ ಚತುರ್ಥಿಯನ್ನು ಇತ್ತೀಚೆಗೆಯಷ್ಟೇ ಆಚರಿಸಿದ್ದೇವೆ, ಆ ದೇವರ ಕೃಪೆಯಿಂದ ಸಕಲ ವಿಘ್ನಗಳು ದೂರವಾಗಿ ಹೊಸ ಬೆಳಕು ಮೂಡಲಿ,ಹೊಸ ಹಾದಿ ತೆರೆಯಲಿ ಮನಸ್ಸು ಪರಿವರ್ತಿತವಾಗಲಿ” ಎಂಬ ಮಾತಿನೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸುತ್ತಾ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು, ಇದರ ಎನ್ ಎಸ್ ಎಸ್ ಪ್ರೋಗ್ರಾಮ ಆಫೀಸರ್ ಡಾ ಉದಯ್ ಕುಮಾರ್, ಲಯನ್ಸ್ ಕ್ಲಬ್ ಝೋನ್ ಚೇಯರ್ ಪರ್ಸನ್ ಆದ ಲಯನ್ ಆಶಾ ನಾಗರಾಜ್, ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚು ನಡೆಯಲಿ ಎಂದು ಶುಭನುಡಿದರು.

ಜೈಲು ಸೂಪರಿಡೆಂಟ್ ಆದಂತಹ ಓಬಲೇಶ್ವರ್ ಅವರು “ಮನಸ್ಸಿನ ಮೇಲೆ ಹಿಡಿತವನ್ನು ಹೊಂದುವಂತಹ ಪ್ರಯತ್ನ ನಡೆಯಬೇಕು ಆಗ ಬದುಕು ಬೆಳಗುವುದು” ಎಂದು ನುಡಿದರು.

ಜಿಲ್ಲಾ ಕಾರಾಗೃಹದಲ್ಲಿನ ಕೈದಿಗಳಿಗಾಗಿ ಉಚಿತ ಕನ್ನಡಕಗಳನ್ನು ಟೈಟನ್ ಐ ಪ್ಲಸ್ ಉರ್ವಸ್ಟೋರ್ ಹಾಗೂ ರೋಟರಿ ಕ್ಲಬ್ ಆಫ್ ಹಿಲ್ ಸೈಡ್ ವತಿಯಿಂದ, ನ್ಯೂಸ್ ಕರ್ನಾಟಕದ ಪ್ರತಿಮಾ ಅವರು ಜೈಲ್ ಸೂಪರಿಡೆಂಟ್ ಓಬಳೇಶ್ವರ್ ಅವರಿಗೆ ಹಸ್ತಾಂತರಿಸಿದರು.

ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು ಇದರ ವಿದ್ಯಾರ್ಥಿಗಳು ಖೈದಿಗಳ ಮನಪರಿವರ್ತನ ಕಾರ್ಯಕ್ರಮಕ್ಕೆ ಸಂಬಂಧಿಸಿದ ನಾಟಕ ಒಂದನ್ನು ಅದ್ಭುತವಾಗಿ ಪ್ರದರ್ಶಿಸಿದರು.

ರೋಟರಿ ಕ್ಲಬ್ ಮಂಗಳೂರು ಮೆಟ್ರೋದ ಸೇಕ್ರೇಟರಿ ಆದ ಸುರೇಖ ಕಿಣಿ ಅವರು ಕಾರ್ಯಕ್ರಮದಲ್ಲಿ ಸಹಕರಿಸಿದ ಸರ್ವರಿಗೆ ಸ್ವಾಗತವನ್ನು ಬಯಸಿದರು. ನ್ಯೂಸ್ ಕರ್ನಾಟಕ, ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು ಇದರ ವಿದ್ಯಾರ್ಥಿಗಳು, ರೋಟರಿ ಕ್ಲಬ್ ಆಫ್ ಮಂಗಳೂರು ಹಿಲ್ಸ್ ಸೈಡ್, ರೋಟರಿ ಕ್ಲಬ್ ಆಫ್ ಮಂಗಳೂರು ಮೆಟ್ರೋ,ಲಯನ್ಸ್ ಅಂಡ್ ಲಿಯೊ ಕ್ಲಬ್ ಆಫ್ ಮಂಗಳೂರು ಮೆಟ್ರೋ ಸಂಸ್ಥೆಗಳ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

See also  ಅಪಘಾತದಲ್ಲಿ ಗಾಯಗೊಂಡು ಪುತ್ರ ಆಸ್ಪತ್ರೆಗೆ ದಾಖಲು: ತಾಯಿ ಆತ್ಮಹತ್ಯೆಗೆ ಶರಣು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು