News Kannada
Friday, September 29 2023
ಮಂಗಳೂರು

ಗಣೇಶ ಚೌತಿಗೆ ಸಂಭ್ರಮದ ಸಿದ್ಧತೆ: ಹೂ, ಹಣ್ಣು, ತರಕಾರಿ, ಕಬ್ಬು ಗರಿಕೆ ಮಾರಾಟ ಜೋರು

Ganesh Chaturthi celebrations: Sale of flowers, fruits, vegetables, sugarcane picks up
Photo Credit : News Kannada

ಮಂಗಳೂರು: ಕರಾವಳಿಯಾದ್ಯಂತ ಸೋಮವಾರ ಗೌರಿ ಹಬ್ಬ ಮಂಗಳವಾರ ಗಣೇಶ ಚರ್ತುಥಿಗೆ ಭರದ ಸಿದ್ಧತೆ ನಡೆದಿದೆ. ಹೂ ಹಣ್ಣು ತರಕಾರಿಗಳು ಪೂಜಾ ಸಾಮಾಗ್ರಿಗಳ ಮಾರಾಟ ಭರಾಟೆ ಜೋರಾಗಿದೆ.

ಕರಾವಳಿಯಲ್ಲಿ ಗಣೇಶ ಚರ್ತುಥಿ ಪ್ರಯುಕ್ತ ಸೋಮವಾರ ಇದ್ದ ರಜೆಯನ್ನು ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ನಿಗಧಿಗೊಳಿಸಲಾಗಿದೆ. ಭಾನುವಾರ ರಜಾ ದಿನವಾದ್ದರಿಂದ ಜನರು ಬಿಡುವಿನಲ್ಲಿ ಸಕಲ ಸಾಮಾಗ್ರಿಗಳನ್ನು ಕೊಳ್ಳುವುದರಲ್ಲಿ ನಿರತರಾಗಿದ್ದರು. ದ.ಕ ಜಿಲ್ಲಾದ್ಯಂತ ವಿವಿಧ ದೇವಾಲಯಗಳು, ಮನೆಗಳಲ್ಲಿ ಹಾಗು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಚೌತಿ ಹಬ್ಬಕ್ಕೆ ವಿಶೇಷ ಸಿದ್ಧತೆ ನಡೆದಿದೆ. ಇಡೀ ಜಿಲ್ಲೆಯಲ್ಲಿ ಸಿದ್ಧತೆಯ ಸಡಗರ ಆವರಿಸಿದೆ. ವಿವಿದೆಡೆ ಕಲಾವಿದರು ರಚಿಸಿದ ಗಣೇಶನ ಮೂರ್ತಿಗೆ ಉತ್ತಮ ಬೇಡಿಕೆ ಬಂದಿದೆ.

ಚೌತಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಹಂಪನಕಟ್ಟೆ, ಸ್ಟೇಟ್‌ ಬ್ಯಾಂಕ್‌ ಕಂಕನಾಡಿ, ಬಿಜೈ ಮುಂಭಾಗ ಸೇರಿದಂತೆ ಎಲ್ಲ ಮಾರುಕಟ್ಟೆ ಪ್ರದೇಶಗಳಲ್ಲಿ ಹೂವು ಹಣ್ಣು ತರಕಾರಿಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಗಣೇಶನಿಗೆ ಪ್ರಿಯವಾದ ಕಬ್ಬು ಗರಿಕೆ ಮಾರಾಟವೂ ಜೋರಾಗಿದೆ. ಬೇಡಿಕೆ ಹೆಚ್ಚಿರುವುದರಿಂದ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಚೌತಿ ದಿನ ಸಂಪ್ರದಾಯದಂತೆ ತೆನೆ ಇಡುವ ಸಂಪ್ರದಾಯವೂ ನಡೆಯಲಿದೆ. ಭತ್ತದ ತೆನೆಯನ್ನು ಪೂಜಿಸಿ ಮನೆಯ ತೋರಣಕ್ಕೆ ಕಟ್ಟಲಾಗುತ್ತದೆ.

ಬ್ಯಾಂಕ್‌ ಗಳಿಗೆ ಇಂದು ರಜೆ: ಜಿಲ್ಲೆಯಲ್ಲಿ ಮಂಗಳವಾರ ಸಾರ್ವತಿಕ ರಜೆ ಘೋಷಣೆ ಮಾಡಿದ್ದರೂ, ಬ್ಯಾಂಕ್‌ ಗಳಿಗೆ ಹಬ್ಬದ ಪ್ರಯುಕ್ತ ಸೋಮವಾರವೇ ರಜೆ ಇರಲಿದೆ.

ಗಣೇಶ ಚರ್ತುಥಿಗಾಗಿ ಗಣೇಶನ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆಯಿದ್ದು ಐಕಳದ ಸಮೀಪದ ಕುದ್ರಿ ಪದವು ಸವಿತಾ ಆರ್ಟ್ಸ್ ಕಲಾವಿದ ಸದಾಶಿವ ಅವರಿಂದ ೮೦ಕ್ಕೂ ಹೆಚ್ಚು ಗಣಪತಿ ವಿಗ್ರಹಗಳು ರಚನೆಗೊಂಡಿದ್ದು ಅಂತಿಮ ರೂಪ ಪಡೆದುಕೊಳ್ಳುತ್ತಿವೆ.

See also  ಬಂಟ್ವಾಳ: ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು