ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಂಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ಶ್ರೀ ದೇವಿ ಎಂಬ ದೇಶಭಕ್ತ ಹೆಣ್ಣುಮಗಳು ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಈ ವಿಷಯ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ಬಂದಿದ್ದು, ಘಟನೆ ನಡೆದ ವೇಳೆ ಸಂಸದರು ದೆಹಲಿಯಲ್ಲಿದ್ದರು. ತಕ್ಷಣ ಆಕೆಯ ಚಿಕಿತ್ಸೆಗೆ ತುರ್ತಾಗಿ ಒಂದೂವರೆ ಲಕ್ಷ ರೂಪಾಯಿ ಕಳುಹಿಸಿಕೊಟ್ಟಿದ್ದಾರೆ. ಅದರೊಂದಿಗೆ ಅವರ ಮನೆಯವರೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯಬಿದ್ದಲ್ಲಿ ಸಹಾಯ ಮಾಡಲು ಕೂಡ ಸಿದ್ಧ ಎಂದು ತಿಳಿಸಿದ್ದಾರೆ.
ಇಷ್ಟು ಸಹಾಯ ಮಾಡಿದರೂ ನಳಿನ್ ಅವರು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಇಂತಹ ನೂರಾರು ಸಹಾಯಗಳನ್ನು ಮೌನದಲ್ಲಿಯೇ ಮಾಡುವ ನಳಿನ್ ಕುಮಾರ್ ಕಟೀಲ್ ಬಹಿರಂಗ ಪ್ರಚಾರ ಎಂದೂ ಬಯಸಿದವರಲ್ಲ. ತಾವು ಸಹಾಯ ಮಾಡಿದ್ದನ್ನು ಯಾರಿಗೂ ಹೇಳುವುದು ಬೇಡ ಎಂದು ತಮ್ಮಿಂದ ಸಹಾಯ ಪಡೆದವರಿಗೂ ಅವರು ಹೇಳುತ್ತಾರೆ ಎಂಬುದು ಅವರ ಆಪ್ತವಲಯದ ಮಾತು.