News Karnataka Kannada
Friday, April 19 2024
Cricket
ಮಂಗಳೂರು

ಎಂಆರ್‌ಪಿಲ್‌ ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ ಮೋಸ- ಹೋರಾಟದ ಎಚ್ಚರಿಕೆ ನೀಡಿದ ಐವನ್‌

Ivan warns of cheating by not giving jobs to locals in MRPL
Photo Credit : News Kannada

ಮಂಗಳೂರು: ಬಿಜೆಪಿಯವರು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಬಹಳ ಅವಸರ ಮಾಡುತ್ತಿದ್ದಾರೆ. ಷರತ್ತಿಲ್ಲದೇ ಯೋಜನೆ ಮಾಡಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಗ್ಯಾರಂಟಿಯನ್ನು ಕಸದ ಬುಟ್ಟಿ, ಆಗಲ್ಲ, ವಾರಂಟಿನೇ ಇಲ್ಲ ಅಂತ ಹೇಳಿದ ಬಿಜೆಪಿ ನಾಯಕರು ಈಗ ಜಾರಿಗೆ ತರುತ್ತಾರೆ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಐವನ್‌ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆ ಕುರಿತು ಮೊದಲ ಕ್ಯಾಬಿನೆಟ್ ನಲ್ಲೇ ಅನುಮೋದನೆ ಮಾಡಿ ಆದೇಶವಾಗಿದೆ. ಯೋಜನೆ ಜಾರಿಗೆ ಮುನ್ನ ಮನೆಯೊಡತಿ ಯಾರು ಎಂದು ಗುರುತಿಸುವುದು ಬೇಡವೇ ಎಂದು ಪ್ರಶ್ನಿಸಿದರು. ಬಿಜೆಪಿಯವರು ರೈತರಿಗೆ 2 ಸಾವಿರ ರೂ. ನೀಡಿದ್ದರು. ಅದರ ಫಲಾನುಭವಿಗಳ ಗುರುತುಪ್ರಕ್ರಿಯೆ ನಡೆಸಿಲ್ಲವೇ ಎಂದು ಪ್ರಶ್ನಿಸಿದರು. ಇಂತಹ ಪ್ರಶ್ನೆ ಕೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ನೈತಿಕತೆ ಇದ್ದಿದ್ದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಬೇಕಿತ್ತು ಎಂದರು. ಮತ್ತೆ ನೋಟ್‌ ಬ್ಯಾನ್‌ ಮಾಡಿದ್ದಾರೆ. ಅದು ಯಾವಕಾರಣಕ್ಕೆ ಎಂಬುದರ ಬಗ್ಗೆ ಉತ್ತರ ಇಲ್ಲ ಎಂದರು.

ಬಿಜೆಪಿಯವರು ಬೊಕ್ಕಸ ಲೂಟಿ ಮಾಡಿದ್ದಾರೆ. ಅದಕ್ಕೆ ಹಣ ಹೊಂದಿಸಬೇಕು, ಯಾವ ರೀತಿ‌ಕೊಡಬೇಕು ಎನ್ನುವ ಪ್ರಕ್ರಿಯೆ ಮುಕ್ತಾಯವಾಗಿ ನಂತರ ಜನರ ಕೈಗೆ ಸಿಗಲಿದೆ.

ಎಂಆರ್‌ಪಿಎಲ್‌ನಲ್ಲಿ ಹುದ್ದೆಗಳಿಗೆ ನೋಟಿಫಿಕೇಶನ್ ಮಾಡಿದ್ದಾರೆ. ಅದರಲ್ಲಿ ಅನ್ಯಾಯವಾಗಿದೆ. ಆನ್ ಕೈನ್ ಅಪ್ಲಿಕೇಶನ್ ಕೂಡದು. ರಾಜ್ಯದವರಿಗೆ ಅದರಲ್ಲೂ ಜಾಗ ಕಳೆದುಕೊಂಡವರಿಗೆ ನೀಡಬೇಕು. ಡಿಪ್ಲೊಮಾ ಪದವೀದರು ಸಾಕಷ್ಡಿದ್ದಾರೆ. ಜಾಹೀರಾತು ಬದಲಿಸಿ, ಸ್ಥಳೀಯರಿಗೆ ಕೊಡಬೇಕು ಎಂದು ಒತ್ತಾಯಿಸಿದರು. ಸಚಿವೆ ಶೋಭಾ ಕರಂದ್ಲಾಜೆ, ಸಂಸದ ನಳಿನ್‌ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು