ಮಂಗಳೂರು: ಕೇಸರಿ ಮಿತ್ರ ವೃಂದಾ ಸೇವಾ ಟ್ರಸ್ಟ್, ಕೇಸರಿ ಮಾತ್ರ ಮಂಡಳಿ ಹಾಗೂ ರೋಟರಿ ಕ್ಲಬ್ ಮಂಗಳೂರು, ರೋಟರಿ ಸಮುದಾಯದಳ ಕುಂಪಲ ಸಹಯೋಗದೊಂದಿಗೆ ಜಗದೀಶ್ ಪೂಜಾರಿ ಅವರ ಮನೆ ಪುನರ್ ನಿರ್ಮಾಣ ಮಾಡಿ ಹಸ್ತಾಂತರ ಮಾಡಲಾಯಿತು.
ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿರುವ ಅವರಿಗೆ ದಾನಿಗಳ ನೆರವಿನಿಂದ ಮನೆಯ ದುರಸ್ತಿ ಕಾಮಗಾರಿ ನಡೆಸಲಾಯಿತು. ಪೂಜಾ ಕಾರ್ಯಕ್ರಮ ನಡೆದ ಬಳಿಕ ರೋ.ಸಿದ್ದಾರ್ಥ ಶೆಟ್ಟಿ ರೋ.ಕಿಶನ್ ಕುಮಾರ್ ಹಾಗೂ ನಾರಾಯಣ ಕುಂಪಲ ಮನೆಯ ಕೀಲಿಕೈ ಹಸ್ತಾಂತರಿಸಿದರು.