ಮಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ಗೆ ಧನ್ಯವಾದ ಎಂದು ಮಂಗಳೂರು ಕಾಂಗ್ರೆಸ್ ಹಿರಿಯ ಮುಖಂಡ ಕೋಡಿಜಾಲ್ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಈಗಾಗಲೇ ಐದು ಭರವಸೆ ಘೋಷಿಸಿದೆ. ಈ ಭರವಸೆ ಪೂರೈಕೆ ಮಾಡುವ ಮಹತ್ತರ ಜವಾಬ್ದಾರಿ ಸಿಎಂ, ಡಿಸಿಎಂ ಮೇಲಿದೆ. ಕಾಂಗ್ರೆಸ್ ಈ ವರೆಗೆ ನೀಡಿದ ಯೋಜನೆ ಭರವಸೆಯಲ್ಲಿ ಯಾವುದರಿಂದಲೂ ಹಿಂದೆ ಸರಿದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ ಎಲ್ಲಾ ಯೋಜನೆಗಳನ್ನು ಜನರಿಗೆ ನೀಡಿದೆ. ಮುಂದೆಯೂ ಇದೇ ರೀತಿ ಆಗುವ ಭರವಸೆ ನೀಡಲಿದ್ದೇವೆ. ಸಿದ್ದರಾಮಯ್ಯ ಅವರು ದೇವರಾಜ್ ಅರಸು ಅವರಂತೆ ಆಡಳಿತ ನಡೆಸಿದ ಸಿಎಂ. ಜಿಲ್ಲೆಯ ನಾಯಕರಲ್ಲಿ ಆತಂರಿಕವಾಗಿ ಯಾವುದೇ ಕೊರತೆ ಇಲ್ಲ. ಹಾಗೆ ನೋಡಿದರೆ ಬಿಜೆಪಿಯಲ್ಲಿ ಆಂತರಿಕ ಜಗಳ ಹೆಚ್ಚಿದೆ. ಹೈಕಮಾಂಡ್ ಕೈಗೊಂಡ ನಿರ್ಧಾರ ಹೆಚ್ಚು ಸೂಕ್ತವಾಗಿದೆ ಎಂದರು.
ಸಿದ್ದರಾಮಯ್ಯ ಅವರ ಇದು ಕೊನೆಯ ಚುನಾವಣೆ ಆ ನಿಟ್ಟಿನಲ್ಲಿ ಹೈಕಮಾಂಡ್ ನಿರ್ಧಾರ ಸ್ಪಷ್ಟವಾಗಿದೆ. ಲೋಕಸಭೆ ಚುನಾವಣೆಗೆ ಶೀಘ್ರವಾಗಿ ಅಭ್ಯರ್ಥಿಗಳನ್ನು ಘೋಷಿಸಲಿದ್ದೇವೆ. ೨೮ ಲೋಕ ಸಭಾ ಕ್ಷೇತ್ರದಲ್ಲಿ ೨೮ ಕ್ಕೂ ಅಧಿಕ ಸ್ಥಾನ ಪಡೆಯಲಿದೆ. ಜಿಲ್ಲೆಯಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ವಿಚಾರ. ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡು ಶಾಸಕರನ್ನು ಪಡೆದಿದೆ. ಆದರೆ ಇಲ್ಲಿ ಅಪಪ್ರಚಾರ ಹೆಚ್ಚಾಗಿದ್ದು ಇದು ಸೋಲಿಗೆ ಕಾರಣವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.