ಮಂಗಳೂರು: ದಯಾ ಕ್ರಿಯೇಷನ್ ಬಾಯಾರು ವತಿಯಿಂದ ನಿರ್ಮಾಣಗೊಂಡಿರುವ ಕುಡ್ಲ ಸೀಮೆದೊಡತಿ ಮಂಗಳಾದೇವಿ ತುಳು ಭಕ್ತಿ ಗೀತೆ ಬಿಡುಗಡೆ ಜೂನ್ 2ರಂದು ಮಂಗಳೂರು ಮಂಗಳಾದೇವಿ ದೇವಳ ಆವರಣದಲ್ಲಿ ಸಂಜೆ 6ಕ್ಕೆ ನಡೆಯಲಿದೆ.
ಶಾಸಕ ವೇದವ್ಯಾಸ ಕಾಮತ್ ಭಕ್ತಿಗೀತೆ ಬಿಡುಗಡೆ ಮಾಡುವರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಎಂಎಲ್ ಅಶ್ವಿನಿ ಉಪಸ್ಥಿತರಿರುವರು.
ಕುಡ್ಲ ಸೀಮೆದೊಡತಿ ಮಂಗಳಾದೇವಿ. ಈ ಹಾಡಿಗೆ ಹರ್ಷಲ್ ಶೆಟ್ಟಿ ಕಲ್ಲಮುಂಡ್ಕೂರು ಸಾಹಿತ್ಯ ಬರೆದಿದ್ದಾರೆ ಕಟೀಲ್ದ ಐಸಿರಿ ಖ್ಯಾತಿದ ದಿಯಾ ರಾವ್. ಕೆ ಮಂಗಳೂರು ಗಾಯನ ಅಭಿನಯದಲ್ಲಿ ಕಿಶೋರ್ ಬೆಳ್ತಂಗಡಿ ಛಾಯಾಗ್ರಹಣ ಮತ್ತು ಸಂಕಲನದಲ್ಲಿ ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆಯಲ್ಲಿ ಭಕ್ತಿ ಗೀತೆ ಮೂಡಿ ಬಂದಿದೆ.
ಇನ್ನು ಕುಡ್ಲ ಸೀಮೆದೊಡತಿ ಮಂಗಳಾದೇವಿ. ತುಳು ಭಕ್ತಿ ಗೀತೆ ದಯಾ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ನಲ್ಲಿ ತೆರೆ ಕಾಣಲಿದೆ.