News Karnataka Kannada
Friday, April 19 2024
Cricket
ಮಂಗಳೂರು

ಸಾಹಿತ್ಯ ಅನುಸಂಧಾನದ ಸಾಮರ್ಥ್ಯ ರೂಢಿಯಾಗಲಿ: ಪ್ರೊ.ಟಿ.ಪಿ.ಅಶೋಕ

Let the capacity of literary interaction be inculcated: Prof. T.P. Ashoka
Photo Credit : News Kannada

ಉಜಿರೆ : ಸಾಹಿತ್ಯದಲ್ಲಿ ಬಳಕೆಯಾಗುವ ಭಾಷೆ ಸಂವಹಿಸುವ ವಿವಿಧ ಬಗೆಯ ಅರ್ಥವಿನ್ಯಾಸಗಳೊಂದಿಗೆ ಅನುಸಂಧಾನ ನಡೆಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು ಎಂದು ವಿಮರ್ಶಕ ಪ್ರೊ. ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು.

ಉಜಿರೆ ಎಸ್. ಡಿ. ಎಂ ಸ್ವಾಯಕ್ತ ಮಹಾವಿದ್ಯಾಲಯದಲ್ಲಿ ಕನ್ನಡ ಸಂಘ ಹಾಗೂ ಹೆಗ್ಗೋಡು ನೀನಾಸಂ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿತ ೨೫ನೆ ಸಾಹಿತ್ಯ ಶಿಬಿರ ರಜತ ಸಂಭ್ರಮದ ಕಲಾನುಸಂದಾನ ಶಿಬಿರದ ಮೊದಲನೇ ಗೋಷ್ಟಿ ಕಾವ್ಯಾನುಸಂದಾನದಲ್ಲಿ ಅವರು ಮಾತನಾಡಿದರು.

ಸಾಹಿತ್ಯದಲ್ಲಿ ಬಳಕೆಯಾಗುವ ಭಾಷೆಯ ಅರ್ಥ ಪದಶಃ ರೀತಿಯಲ್ಲಿರುವುದಿಲ್ಲ. ಅರ್ಥವಂತಿಕೆಯ ನಿರೂಪಣೆಯು ಭಾಷೆಯ ನೆರವಿನೊಂದಿಗೆ ನಡೆಯುತ್ತದೆ. ಇಂಥ ಭಾಷಿಕ ಸತ್ವದೊಂದಿಗೆ ಅನುಸಂಧಾನ ನಡೆಸುವುದು ಸುಲಭವಲ್ಲ ಎಂದರು.

ಕಾವ್ಯದಲ್ಲಿ ಶಬ್ದ ಶರೀರವೇ ಅದಕ್ಕೆ ಆಧಾರ. ಒಬ್ಬರಿಗೆ ಒಂದು ಕವಿತೆ ನೀಡುವ ಅನುಭವ ಮತ್ತೊಬ್ಬರಿಗೆ ಅದೇ ಸ್ವಾದ ನೀಡಬೇಕು ಎಂದೇನಿಲ್ಲ. ಸಾಹಿತ್ಯದಲ್ಲಿ ಒಂದು ಪದ, ವಾಕ್ಯಕ್ಕೆ ಅನೇಕ ಅರ್ಥಬಾಹುಳ್ಯ ಇರುತ್ತವೆ. ಕಾವ್ಯಸಹೃದಯತೆ ಎಂಬುದನ್ನು ಅರಿಯಬೇಕಾದರೆ ಕನ್ನಡ ಕವಿ ದಿಗ್ಗಜರ ಕವಿತೆ ಅಧ್ಯಯನ ಮುಖ್ಯ. ನರಸಿಂಹಸ್ವಾಮಿ, ಎ ಕೆ ರಾಮಾನುಜಂ, ವೈದೇಹಿಯವರ ನಾಲ್ಕು ಕಾವ್ಯಗಳನ್ನು ನೆರೆದ ವಿದ್ಯಾರ್ಥಿಗಳ ಎದುರು ಪ್ರಸ್ತುತಪಡಿಸುವ ಮೂಲಕ ಕಾವ್ಯಾವಲೋಕನ ನಡೆಸಿದರು.

ಕವಿತೆ ಎನ್ನುವುದು ಕವಿ ಮತ್ತು ಓದುಗನ ನಡುವಿನ ಅನುಸಂಧಾನ. ಕಾವ್ಯಕ್ಕೆ ಜೀವ ಬರುವುದು ಅದು ಓದುಗನ ಕೈ ಸೇರಿದಾಗ. ಪದ್ಯ ಎಂಬುದು ವಕ್ರೋಕ್ತಿ. ಕವಿತೆಗೆ ಪದವೇ ಪದಾರ್ಥ ಎಂದು ವಿಶ್ಲೇಷಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು