News Kannada
Wednesday, May 31 2023
ಮಂಗಳೂರು

ಪುತ್ತಿಲರನ್ನು ದ.ಕ ಜಿಲ್ಲಾ ಸಂಸದ ಅಭ್ಯರ್ಥಿಯಾಗಿ ಘೋಷಣೆ ಮಾಡುವಂತೆ ಮೋದಿಗೆ ಪತ್ರ

Letter to PM Modi to declare Puttila as DK district MP candidate
Photo Credit : News Kannada

ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ರಣರೋಚಕ ಸ್ಪರ್ಧೆ ನೀಡಿ ಅಲ್ಪ ಮತಗಳಿಂದ ಸೋತ ಹಿಂದೂ ಮುಖಂಡ ಅರುಣ್ ಪುತ್ತಿಲ ಪರ ಜಿಲ್ಲಾದ್ಯಂತ ಹವಾ ಎದ್ದಿದೆ. ಪುತ್ತಿಲ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಅಭ್ಯರ್ಥಿಯಾಗಿ ಘೋಷಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಖ್ಯಾತ ವಾಗ್ಮಿ ಅಕ್ಷಯ ಗೋಖಲೆ ಪತ್ರ ಬರೆದಿದ್ದಾರೆ.

ಈ ನಡುವೆ ‘ಪುತ್ತೂರಿಗೆ ಪುತ್ತಿಲ ‘ ಘೋಷಣೆ ಬದಲಾಗಿ ‘ ತುಳುನಾಡಿಗೆ ಪುತ್ತಿಲ ‘ ಎಂಬ ಹೊಸ ಘೋಷಣೆ ಪ್ರಾರಂಭವಾಗಿದೆ. ಜಿಲ್ಲೆಯಾದ್ಯಂತ ಅರುಣ್ ಪುತ್ತಿಲ ಸಂಸದ ಅಭ್ಯರ್ಥಿಯಾಗಬೇಕೆಂದು ಒತ್ತಾಯ ಪ್ರಾರಂಭವಾಗಿದೆ. 2024 ರ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ \ ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆದಷ್ಟು ಶೀಘ್ರವೇ ಘೋಷಿಸಬೇಕೆಂದು ಅಲ್ಲದೆ ಈ ಮೂಲಕ ರಾಜ್ಯ -ದೇಶ- ಜಿಲ್ಲೆಯ ಹಿಂದುತ್ವವನ್ನು ಉಲಿಸಬೇಕು ಎಂದು ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಪುತ್ತಿಲ ಅವರನ್ನು ಪುತ್ತಿಲ ದಕ್ಷಿಣ ಕನ್ನಡ ಎಂಪಿ ಎಂಬ ವಾಟ್ಸಾಪ್ ಗ್ರೂಪ್ ಪ್ರಾರಂಭವಾಗಿದ್ದು , ಕೇವಲ 1 ಗಂಟೆಯಲ್ಲಿ 1500 ಜನರ ವಾಟ್ಸಾಪ್ ಗ್ರೂಪ್ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

See also  ನವದೆಹಲಿ: ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ದರ ಕಡಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು