ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ರಣರೋಚಕ ಸ್ಪರ್ಧೆ ನೀಡಿ ಅಲ್ಪ ಮತಗಳಿಂದ ಸೋತ ಹಿಂದೂ ಮುಖಂಡ ಅರುಣ್ ಪುತ್ತಿಲ ಪರ ಜಿಲ್ಲಾದ್ಯಂತ ಹವಾ ಎದ್ದಿದೆ. ಪುತ್ತಿಲ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಅಭ್ಯರ್ಥಿಯಾಗಿ ಘೋಷಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಖ್ಯಾತ ವಾಗ್ಮಿ ಅಕ್ಷಯ ಗೋಖಲೆ ಪತ್ರ ಬರೆದಿದ್ದಾರೆ.
ಈ ನಡುವೆ ‘ಪುತ್ತೂರಿಗೆ ಪುತ್ತಿಲ ‘ ಘೋಷಣೆ ಬದಲಾಗಿ ‘ ತುಳುನಾಡಿಗೆ ಪುತ್ತಿಲ ‘ ಎಂಬ ಹೊಸ ಘೋಷಣೆ ಪ್ರಾರಂಭವಾಗಿದೆ. ಜಿಲ್ಲೆಯಾದ್ಯಂತ ಅರುಣ್ ಪುತ್ತಿಲ ಸಂಸದ ಅಭ್ಯರ್ಥಿಯಾಗಬೇಕೆಂದು ಒತ್ತಾಯ ಪ್ರಾರಂಭವಾಗಿದೆ. 2024 ರ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ \ ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆದಷ್ಟು ಶೀಘ್ರವೇ ಘೋಷಿಸಬೇಕೆಂದು ಅಲ್ಲದೆ ಈ ಮೂಲಕ ರಾಜ್ಯ -ದೇಶ- ಜಿಲ್ಲೆಯ ಹಿಂದುತ್ವವನ್ನು ಉಲಿಸಬೇಕು ಎಂದು ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಪುತ್ತಿಲ ಅವರನ್ನು ಪುತ್ತಿಲ ದಕ್ಷಿಣ ಕನ್ನಡ ಎಂಪಿ ಎಂಬ ವಾಟ್ಸಾಪ್ ಗ್ರೂಪ್ ಪ್ರಾರಂಭವಾಗಿದ್ದು , ಕೇವಲ 1 ಗಂಟೆಯಲ್ಲಿ 1500 ಜನರ ವಾಟ್ಸಾಪ್ ಗ್ರೂಪ್ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.