News Karnataka Kannada
Thursday, April 25 2024
ಮಂಗಳೂರು

ರಸ್ತೆ ಸುರಕ್ಷತೆಗೆ ಲಯನ್ಸ್ ಕ್ಲಬ್ ಕಾವೂರು ನೆರವು ಶ್ಲಾಘನೀಯ: ಕುಡ್ಪಿ ಅರವಿಂದ್ ಶೆಣೈ

Lions Club Kavoor's work for road safety commendable: Lion Kudpi Aravind Shenoy
Photo Credit : News Kannada

ಮಂಗಳೂರು: ವಾಮಂಜುರಿನ ನಿರಾಳ, ತಾರಿಗುಡ್ಡೆ, ಕೆಲರೈ, ನೀರ್ ಮಾರ್ಗ ರಸ್ತೆಯಲ್ಲಿ ಅಪಾಯಕಾರಿ ತಿರುವುಗಳಿರುವುದರಿಂದ ಲಯನ್ಸ್ ಕ್ಲಬ್ ಮಂಗಳೂರು ಕಾವೂರು ವತಿಯಿಂದ ಸುಮಾರು 20 ಸಾವಿರ ರೂಪಾಯಿಯ 4 ಟ್ರಾಫಿಕ್ ಕಾನ್ವೆಕ್ಸ್ ಮಿರರ್ ಗಳನ್ನು ಅಳವಡಿಸಲಾಯಿತು.

ಈ ಸಂದರ್ಭದಲ್ಲಿ , ದ್ವಿತೀಯ ಉಪ ಗವರ್ನರ್‌ ಲಯನ್ ಕುಡ್ಪಿ ಅರವಿಂದ ಶೆಣೈ ಯವರು ಮಾತನಾಡಿ ಗ್ರಾಮೀಣ ಪ್ರದೇಶದ ಅಪಾಯಕಾರಿ ತಿರುವುಗಳಲ್ಲಿ ಅಪಘಾತಗಳ ತಪ್ಪಿಸುವ ಸಲುವಾಗಿ ಕನ್ವೆಕ್ಸ್ ಮಿರರ್ ಗಳನ್ನು ಅಳವಡಿಸಿರುವುದು ನಿಜಕ್ಕೂ ಶ್ಲಾಘನೀಯ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮೂಡಿ ಬರಲಿ ಎಂದರು.

ಪ್ರಾಂತ್ಯ 11 ರ ಪ್ರಾಂತ್ಯ ಅಧ್ಯಕ್ಷರಾದ ಲಯನ್ ಶೇಖರ್ ಪೂಜಾರಿ, ವಲಯ ಅಧ್ಯಕ್ಷರಾದ ಲಯನ್ ಸುಧೀರ್ ಕುಮಾರ್, ಲಯನ್ಸ್ ಕ್ಲಬ್ ಕಾವ್ ಅಧ್ಯಕ್ಷರಾದ ಲಯನ್ ವಿಕ್ಟರ್ ಮೊರಸ್, ಸಂಗಮ ಕಾರ್ಡಿ ನೇಟರ್ ಲಯನ್ ಮೋಹನದಾಸ್ ಶೆಟ್ಟಿ, ಕಾರ್ಯದರ್ಶಿ ಅಶ್ವಿನ್ ಕುಮಾರ್, ಖಜಾಂಜಿ ರಾಕೇಶ್ ಶೆಟ್ಟಿ, ಮಾಜಿ ರೀಜನ್ ಪರ್ಸನ್ ಸ್ವರೂಪ ಶೆಟ್ಟಿ, ಶ್ರೀಧರ್ ನಾಯಕ್, ಹಾಗೂ ರೇಷ್ಮಾ ಮೊರಾಸ್ ಉಪಸ್ಥಿತರಿದ್ದರು. ಲಯನ್ ಮೋಹನದಾಸ್ ಶೆಟ್ಟಿ ಅವರು ಸ್ವಾಗತಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು