ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಅವರು ಇಂದು ( ಶುಕ್ರವಾರ ) ಮಧ್ಯಾಹ್ನ ನಗರದ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು. ಬಳಿಕ ಶ್ರೀ ಕ್ಷೇತ್ರದಲ್ಲಿ ಅನ್ನ ಪ್ರಸಾದ ಸೇವಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಗಣೇಶ್ ಕುಂಟಲ್ ಪಾಡಿ, ಕಾರ್ಪೊರೇಟರ್ ಎ. ಸಿ. ವಿನಯರಾಜ್, ಮಾಜಿ ಕಾರ್ಪೊರೇಟರ್ ಗಳಾದ ಪ್ರೇಮ್ ಚಂದ್, ಪದ್ಮನಾಭ ಅಮೀನ್ ಹಾಗೂ ಪ್ರಮುಖರಾದ ಟಿ. ಕೆ. ಸುಧೀರ್, ದುರ್ಗಾ ಪ್ರಸಾದ,ಅಶೋಕ್ ಕುಡುಪಾಡಿ, ಗಣೇಶ್, ವಿಕಾಸ್ ಶೆಟ್ಟಿ, ಪ್ರವೀಣ್ ಸಾಲ್ಯಾನ್, ಗಿರೀಶ್ ಶೆಟ್ಟಿ,ಜ್ಞಾನೇಶ್ ಕುಮಾರ್, ಪ್ರಸಾದ,ಹೇಮಂತ್ ಮೊದಲಾದವರು ಉಪಸ್ಥಿತರಿದ್ದರು.