News Kannada
Wednesday, May 31 2023
ಮಂಗಳೂರು

ಮಂಗಳೂರು: ಶಾಸಕ ಹರೀಶ್‌ ಪೂಂಜಾ ನೇತೃತ್ವದಲ್ಲಿ ಎಳನೀರು ಪ್ರದೇಶ ಅಭಿವೃದ್ಧಿಗೆ ವೇಗ

Mangaluru: Development works required for coconut water are in progress
Photo Credit : News Kannada

ಮಂಗಳೂರು: ದ.ಕ ಜಿಲ್ಲೆಯ ಹಾಗೂ ಬೆಳ್ತಂಗಡಿ ತಾಲೂಕಿನ ಕೊನೆಯ ಭಾಗದಲ್ಲಿರುವ ಎಳನೀರು ಪ್ರದೇಶದಲ್ಲಿ ಹಲವು ಅಗತ್ಯ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಇಲ್ಲಿನ ಜನರ ಹಲವು ದಶಕಗಳ ಪ್ರಮುಖ ಬೇಡಿಕೆಗಳು ಮುಂದಿನ ಕೆಲವೇ ಸಮಯದಲ್ಲಿ ಪೂರ್ಣಗೊಳ್ಳಲಿದೆ.

ತಾಲೂಕು ಕೇಂದ್ರದಿಂದ 125 ಕಿಮೀ ದೂರದಲ್ಲಿರುವ ಎಳನೀರು ಅತ್ಯಂತ ದುರ್ಗಮ ಪ್ರದೇಶವಾಗಿದ್ದು ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿತ್ತು. ಸುಮಾರು 150 ಮನೆ ಹಾಗೂ 600 ರಷ್ಟು ಜನಸಂಖ್ಯೆ ಇರುವ ಈ ಪ್ರದೇಶ ನೇತ್ರಾವತಿ ನದಿಯ ಉಗಮ ಸ್ಥಾನದಲ್ಲಿದೆ. ಇಲ್ಲಿನ ಜನ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದನ್ನು ಮನಗಂಡ ಶಾಸಕ ಹರೀಶ್ ಪೂಂಜ ಇಲ್ಲಿನ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಹಲವಾರು ಯೋಜನೆಗಳನ್ನು ರೂಪಿಸಿ ಅವುಗಳನ್ನು ನಾನಾ ಅನುದಾನಗಳ ಮೂಲಕ ಅನುಷ್ಠಾನಗೊಳಿಸಿದರು. ಇದರಲ್ಲಿ ಅಗತ್ಯ ಸ್ಥಳಗಳಲ್ಲಿ ಕಿರು ಸೇತುವೆ,ಶಾಲೆ, ಅಂಗನವಾಡಿ ಅಭಿವೃದ್ಧಿಗಳನ್ನು ಈಗಾಗಲೇ ಮಾಡಲಾಗಿದೆ. ಬೆಳಕು ಯೋಜನೆಯಲ್ಲಿ ಇಲ್ಲಿನ ಹಲವಾರು ಮನೆಗಳಿಗೆ ಮೆಸ್ಕಾಂನಿಂದ ವಿದ್ಯುತ್ ಬೆಳಕು ನೀಡುವ ಯೋಜನೆ ಈಗಾಗಲೇ ಲೋಕಾರ್ಪಣೆಗೊಂಡು ಇಲ್ಲಿನ ಜನರು ವಿದ್ಯುತ್ ಬೆಳಕು ನೋಡುವಂತಾಗಿದೆ.

ಅತ್ತ ಚಿಕ್ಕಮಗಳೂರಿಗೆ ಹತ್ತಿರ,ದಕಜಿಲ್ಲೆಗೆ ದೂರದಲ್ಲಿರುವ ಎಳನೀರಿನ ಅಭಿವೃದ್ಧಿ ಕಾಮಗಾರಿಗೆ ಸಲಕರಣೆಗಳನ್ನು ಸಾಗಿಸಲು ಸಾಕಷ್ಟು ಸುತ್ತು ಬಳಸಿ ಸಾಗಬೇಕು. ಅಗಲ ಕಿರಿದಾಗ ಇಲ್ಲಿನ ಒಳ ರಸ್ತೆಗಳಲ್ಲಿ ಯಂತ್ರೋಪಕರಣಗಳನ್ನು ಸಾಧಿಸಲು ಸಮಸ್ಯೆ ಇದೆ.ಆದರೂ ಈಗಾಗಲೇ ಇಲ್ಲಿ ಪ್ರಮುಖ ಕಾಮಗಾರಿಗಳು ಪ್ರಗತಿಯಲ್ಲಿವೆ.

ಒಡ್ಡಿ ಪ.ಪಂಗಡದ ಕಾಲೋನಿ ಅಭಿವೃದ್ದಿ:
ಸುಮಾರು 10 ಮನೆಗಳಿರುವ ಒಡ್ಡಿ ಪರಿಶಿಷ್ಟ ಪಂಗಡದ ಕಾಲೋನಿಗೆ ಸಂಪರ್ಕ ಕಲ್ಪಿಸಲು 5 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಕಿರು ಸೇತುವೆಗಳು ರಚನೆಗೊಳ್ಳುತ್ತಿವೆ.

1.280ಕಿಮೀ. ರಸ್ತೆಗೆ ಈಗಾಗಲೇ ಕಾಂಕ್ರೀಟಿಕರಣ ಪೂರ್ಣಗೊಂಡಿದೆ. ಅಲ್ಲದೆ ಕಿರಿ ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಈ ಪರಿಸರದ ಜನತೆಗೆ ಕಾಯಂ ಸಂಪರ್ಕ ವ್ಯವಸ್ಥೆಯಾಗಲಿದೆ. ಇದರ ಜತೆ ದಿಡುಪೆ- ಎಳನೀರು ರಸ್ತೆಯಲ್ಲಿರುವ ಜಲಪಾತ ಪ್ರದೇಶದಲ್ಲೂ ಕಿರು ಸೇತುವೆ ರಚನೆಗೊಳ್ಳುತ್ತಿದೆ. ಹೀಗೆ ಒಟ್ಟು ಐದು ಕಿರು ಸೇತುವೆಗಳು ನಿರ್ಮಾಣವಾಗಲಿವೆ.

ಬಂಗಾರಪಲ್ಕೆಗೆ ಸಂಪರ್ಕ
ಸುಮಾರು 15 ಮನೆಗಳಿರುವ ಇಲ್ಲಿನ ಬಂಗಾರಪೇಟೆ ಪರಿಸರಕ್ಕೆ ವಾಹನ ಸಂಚಾರ ದುಸ್ತರವಾಗಿದೆ.ಇಲ್ಲಿನ ಕಚ್ಚಾ ರಸ್ತೆ ತೀರಾ ಹದಗೆಟ್ಟು ಜನರು ಸಂಚಾರಕ್ಕೆ ಬವಣೆ ಪಡುತ್ತಿದ್ದರು. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಕ್ಕೆ ಕಾಲು ಸಂಕವೇ ಆಸರೆಯಾಗಿತ್ತು.ಇಲ್ಲಿ ಕಿಂಡಿ ಅಣೆಕಟ್ಟು ಸಹಿತ‌ ಸೇತುವೆ ನಿರ್ಮಾಣಗೊಳ್ಳುತ್ತಿದೆ ಇದರ ಹೆಚ್ಚಿನ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿನ ಸಂಪರ್ಕ ರಸ್ತೆಯ ಅಭಿವೃದ್ಧಿ ನಡೆಯುತ್ತಿದೆ. ತಡೆಗೋಡೆ ಸಹಿತ ರಸ್ತೆ ನಿರ್ಮಾಣವಾಗಲಿದ್ದು ಇದು ಕೂಡ ಸುಮಾರು 5 ಕೋಟಿ ರೂ. ಅನುದಾನದಲ್ಲಿ ನಡೆಯಲಿದೆ. ಈ ಎಲ್ಲಾ ಕಾಮಗಾರಿಗಳಿಂದ ಎಳನೀರು ಪ್ರದೇಶದ ಒಳ ರಸ್ತೆಗಳ ಸಂಪರ್ಕ ಸಮಸ್ಯೆಗೆ ಪರಿಹಾರ ಸಿಗಲಿದೆ.

See also  ನವದೆಹಲಿ: ಮಧ್ಯಪ್ರದೇಶದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾತುಕತೆ, ನಡ್ಡಾ ಅವರನ್ನು ಭೇಟಿಯಾದ ಚೌಹಾಣ್

ದಿಡುಪೆ-ಎಳನೀರು ರಸ್ತೆ:
ತಾಲೂಕು ಕೇಂದ್ರದಿಂದ ದಿಡುಪೆ ಮೂಲಕ ಎಳನೀರಿಗೆ ಇರುವ ದೂರ ಕೇವಲ 30ಕಿಮೀ. ಆದರೆ ದಿಡುಪೆಯಿಂದ ಎಳನೀರಿಗೆ ಸಂಪರ್ಕ ನೀಡುವ ರಸ್ತೆಯಲ್ಲಿ ಬೇಸಿಗೆಕಾಲದಲ್ಲಿ ಜೀಪ್ ಮೂಲಕ ಮಾತ್ರ ಸಂಚರಿಸಬಹುದು. ಮಳೆಗಾಲದಲ್ಲಿ ಇಲ್ಲಿ ಸಂಚಾರ ಅಸಾಧ್ಯ. ಈ ರಸ್ತೆಯ ಅಭಿವೃದ್ಧಿಗೆ ಅರಣ್ಯ ಸಮಸ್ಯೆ ತಡೆಯಾಗಿದ್ದು, ಶಾಸಕ ಹರೀಶ್ ಪೂಂಜ ಅರಣ್ಯ ಪರಿಸರದ ಮೂಲಕ ರಸ್ತೆ ಅಭಿವೃದ್ಧಿಪಡಿಸಲು ಸಂಬಂಧ ಪಟ್ಟ ಇಲಾಖೆಗಳ ಜತೆ ಪ್ರಥಮ ಹಂತದ ಮಾತುಕತೆಗಳನ್ನು ನಡೆಸಿದ್ದರು. ಈ ರಸ್ತೆ ಅಭಿವೃದ್ಧಿ ಹೊಂದಿದರೆ ಎಳನೀರು ಪ್ರದೇಶದ ಜನರಿಗೆ ಭಾರಿ ಅನುಕೂಲವಾಗಲಿದೆ. ಈಗಾಗಲೇ ಕಂದಾಯ ವ್ಯಾಪ್ತಿಯಲ್ಲಿರುವ ಈ ರಸ್ತೆಯ ಪ್ರದೇಶಗಳಲ್ಲಿ ಕಾಂಕ್ರಿಟಿಕರಣದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅರಣ್ಯ ವ್ಯಾಪ್ತಿಯ ರಸ್ತೆ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಹೊಂದಿಲ್ಲ.

“ಹರೀಶ್ ಪೂಂಜ ಅವರು ಶಾಸಕರಾದ ಬಳಿಕ ಎಳನೀರಿನ ಅಭಿವೃದ್ಧಿ ಶಕೆ ಆರಂಭವಾಗಿದ್ದು ಹಲವಾರು ಕಾಮಗಾರಿಗಳು ನಡೆದಿವೆ. ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರಿಂದ ಈ ಪ್ರದೇಶದ ಜನರ ಅನೇಕ ವರ್ಷಗಳ ಮೂಲಭೂತ ಸೌಕರ್ಯ ಕೊರತೆಗೆ ಪರಿಹಾರ ಸಿಕ್ಕಿದೆ”- ಪ್ರಕಾಶ್ ಜೈನ್, ಕೃಷಿಕರು, ಎಳನೀರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು