ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸುವ ಮೂಲಕ ಕರ್ನಾಟಕ ರಾಜ್ಯದ ಸಿಂಹಾಸನವನ್ನೇರಲು ಕಾಂಗ್ರೆಸ್ ಸರ್ವ ಸಿದ್ಧತೆ ನಡೆಸುತ್ತಿದೆ. ವಿವಿಧ ಗ್ಯಾರಂಟಿ ಯೋಜನೆಗಳ ಜನರ ಮನಗೆದ್ದಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಮುನ್ನಡಿಯಿಟ್ಟಿದೆ.
ಈ ನಿಟ್ಟಿನಲ್ಲಿ ಭಾವಿ ಮಂತ್ರಿ ಮಂಡಲದಲ್ಲಿ ಸಂಭಾವ್ಯ ಸಚಿವರಾಗುವ ಶಾಸಕರುಗಳ ಬಗ್ಗೆ ಕುತೂಹಲಭರಿತ ಚರ್ಚೆ ಆರಂಭಗೊಂಡಿದೆ. ವಿಧಾನಪರಿಷತ್ ಸದಸ್ಯರಾಗಿರುವ ಮಂಜುನಾಥ್ ಭಂಡಾರಿ ಈ ಬಾರಿ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಪಡೆಯಲಿದ್ದಾರೆ ಎಂಬ ನಿರೀಕ್ಷೆ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ. ಸಚಿವರಾಗುವುದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಅವರು ನೇಮಕಗೊಳ್ಳಬೇಕು ಎಂಬ ಆಶಯ ಹಲವರದ್ದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿರುವ ಮಂಜುನಾಥ ಭಂಡಾರಿ, ರಾಜಕೀಯ ಕ್ಷೇತ್ರದಲ್ಲಿ ಆರೋಪಗಳಿಂದ ಮುಕ್ತರಾದವರು. ಅಜಾತಶತ್ರು ಎಂದು ಹೆಸರು ಗಳಿಸಿದವರು. ರಾಜಕಾರಣ ಮತ್ತು ಸೈದ್ಧಾಂತಿಕತೆ ವ್ಯಕ್ತಿ ದ್ವೇಷದ ಆಚೆ ನಿಲ್ಲಬೇಕು ಎಂಬ ನಿಲುವು ಹೊಂದಿದವರು. ಈ ನಿಟ್ಟಿನಲ್ಲಿ ಭಂಡಾರಿ ಸಚಿವರಾಗಬೇಕು ಎಂಬ ಒತ್ತಾಯ ಕಾರ್ಯಕರ್ತರ ವಲಯದಿಂದ ಕೇಳಿಬಂದಿದೆ.