News Karnataka Kannada
Friday, April 26 2024
ಮಂಗಳೂರು

ಮಂಗಳೂರು: ಸಚಿವರಾಗಲಿದ್ದಾರೆಯೇ ಶಿಕ್ಷಣ ಕ್ಷೇತ್ರದ ಸಾಧಕ, ಅಜಾತಶತ್ರು ಮಂಜುನಾಥ ಭಂಡಾರಿ

Education aspirant Manjunath Bhandari to become minister
Photo Credit : News Kannada

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಬಹುಮತ ಗಳಿಸುವ ಮೂಲಕ ಕರ್ನಾಟಕ ರಾಜ್ಯದ ಸಿಂಹಾಸನವನ್ನೇರಲು ಕಾಂಗ್ರೆಸ್ ಸರ್ವ ಸಿದ್ಧತೆ ನಡೆಸುತ್ತಿದೆ. ವಿವಿಧ ಗ್ಯಾರಂಟಿ ಯೋಜನೆಗಳ ಜನರ ಮನಗೆದ್ದಿರುವ ಕಾಂಗ್ರೆಸ್‌ ಸರ್ಕಾರ ರಚನೆಗೆ ಮುನ್ನಡಿಯಿಟ್ಟಿದೆ.

ಈ ನಿಟ್ಟಿನಲ್ಲಿ ಭಾವಿ ಮಂತ್ರಿ ಮಂಡಲದಲ್ಲಿ ಸಂಭಾವ್ಯ ಸಚಿವರಾಗುವ ಶಾಸಕರುಗಳ ಬಗ್ಗೆ ಕುತೂಹಲಭರಿತ ಚರ್ಚೆ ಆರಂಭಗೊಂಡಿದೆ. ವಿಧಾನಪರಿಷತ್ ಸದಸ್ಯರಾಗಿರುವ ಮಂಜುನಾಥ್ ಭಂಡಾರಿ ಈ ಬಾರಿ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಪಡೆಯಲಿದ್ದಾರೆ ಎಂಬ ನಿರೀಕ್ಷೆ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ. ಸಚಿವರಾಗುವುದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಅವರು ನೇಮಕಗೊಳ್ಳಬೇಕು ಎಂಬ ಆಶಯ ಹಲವರದ್ದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿರುವ ಮಂಜುನಾಥ ಭಂಡಾರಿ, ರಾಜಕೀಯ ಕ್ಷೇತ್ರದಲ್ಲಿ ಆರೋಪಗಳಿಂದ ಮುಕ್ತರಾದವರು. ಅಜಾತಶತ್ರು ಎಂದು ಹೆಸರು ಗಳಿಸಿದವರು. ರಾಜಕಾರಣ ಮತ್ತು ಸೈದ್ಧಾಂತಿಕತೆ ವ್ಯಕ್ತಿ ದ್ವೇಷದ ಆಚೆ ನಿಲ್ಲಬೇಕು ಎಂಬ ನಿಲುವು ಹೊಂದಿದವರು. ಈ ನಿಟ್ಟಿನಲ್ಲಿ ಭಂಡಾರಿ ಸಚಿವರಾಗಬೇಕು ಎಂಬ ಒತ್ತಾಯ ಕಾರ್ಯಕರ್ತರ ವಲಯದಿಂದ ಕೇಳಿಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು