News Karnataka Kannada
Saturday, April 27 2024
ಮಂಗಳೂರು

ಮಂಗಳೂರು: ಸೋಲಿನ ಹತಾಶೆಯಿಂದ ಐಟಿ ದಾಳಿ, ಅಶೋಕ್‌ ಕುಮಾರ್‌ ರೈ

Mangaluru: I-T raids on Ashok Kumar Rai out of frustration over defeat
Photo Credit : News Kannada

ಮಂಗಳೂರು: ನಾನು ತೆರಿಗೆ ಪಾವತಿದಾರ. ವರ್ಷಕ್ಕೆ ಕೋಟ್ಯಂತರ ರೂ. ತೆರಿಗೆ ಪಾವತಿಸುತ್ತೇನೆ. ಬಿಜೆಪಿ ಮುಖಂಡರು ಸೋಲಿನ ಹತಾಶೆಯಿಂದ ಬೆಂಗಳೂರಿನ ನನ್ನ ಮನೆ ಮೇಲೆ ಐಟಿ ದಾಳಿಸಿ ಮಾಡಿಸಿದ್ದಾರೆ. ಆದರೆ ಅವರಿಗೆ ಅಲ್ಲಿ ಏನು ಸಿಕ್ಕಿಲ್ಲ. ಬರಿಗೈಯಲ್ಲಿ ವಾಪಸಾಗಿದ್ದಾರೆ ಎಂದು ಪುತ್ತೂರು ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಹೇಳಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವುದು ಆ ಪಕ್ಷದ ಮುಖಂಡರಿಗೆ ಖಚಿತವಾಗಿದೆ. ಈ ಕಾರಣ ಹತಾಶೆಯಿಂದ ಮೈಸೂರಿನಲ್ಲಿರುವ ನನ್ನ ಸಹೋದರನ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ ಎಂದರು.

ನನ್ನ ಸಹೋದರನ ವ್ಯವಹಾರವೇ ಬೇರೆ ಅದೇರೀತಿ ನನ್ನ ಉದ್ಯಮ, ರಾಜಕೀಯ ಕ್ಷೇತ್ರವೇ ಬೇರೆ. ಆತ ತೆರಿಗೆ ಪಾವತಿದಾರ ನನಗೂ ಅವರಿಗೂ ವ್ಯವಹಾರಿಕ ಸಂಬಂಧಗಳಿಲ್ಲ. ನನಗೆ ದೊರೆತಿರುವ ಅಭೂತಪೂರ್ವ ಜನಬೆಂಬಲ ನೋಡಿ ಕಂಗಾಲಾಗಿ ಈ ಐಟಿ ದಾಳಿ ರಾಜಕೀಯ ಆರಂಭಿಸಿದ್ದಾರೆ ಎಂದು ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ.

ಡಿ.ವಿ ಸದಾನಂದ ಗೌಡ ನಾನು ಮಿತ್ರನಲ್ಲ ಶತ್ರು ಎಂದಿದ್ದಾರೆ. ಡಿ.ವಿ ಸದಾನಂದ ಗೌಡ ನನಗೆ ಯಾವತ್ತೂ ಶತ್ರು ಅಲ್ಲ. ಆಪ್ತ ಮಿತ್ರರು. ನನಗೆ ಯಾರೂ ಶತ್ರುಗಳಿಲ್ಲ. ಎಲ್ಲರೂ ಮಿತ್ರರೇ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು