ಮಂಗಳೂರು: ಕಡೆಗೂ ಮಂಗಳೂರಿನಲ್ಲಿ ಮಳೆಯ ದರ್ಶನವಾಗಿದೆ. ಬುಧವಾರ ರಾತ್ರಿ ಕೊಂಚಾಡಿ ಪರಿಸರದಲ್ಲಿ ಧಾರಾಕಾರ ಮಳೆಯಾಗಿತ್ತು.
ಗುರುವಾರ ಮಂಗಳೂರು ನಗರದಲ್ಲಿ ಕೆಲ ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ಕಡು ಬಿಸಿಲಿಗೆ ಕಂಗೆಟ್ಟಿದ್ದ ಕರಾವಳಿಗರು ಮಳೆಯಿಂದಾಗಿ ಸ್ವಲ್ಪ ನೆಮ್ಮದಿ ಪಡುವಂತಾಗಿದೆ. ನದಿಗಳಲ್ಲಿ ನೀರು ಬತ್ತಿಹೋಗಿ ಆವರಿಸುತ್ತಿದ್ದ ಬರ ಆವರಿಸಿದ್ದು. ಮಳೆ ಮಂಗಳೂರಿನ ಜನರಲ್ಲಿ ಮಂದಹಾಸ ಮೂಡಿಸಿದೆ.