ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನತಾದಳ (ಜಾ) ಬೆಂಗರೆ ವಲಯ ವತಿಯಿಂದ ಪಕ್ಷದ ಅಭ್ಯರ್ಥಿ ಸುಮತಿ ಹೆಗ್ಡೆ ಯವರು ಇಂದು ಬೆಂಗರೆಯಲ್ಲಿ ರೋಡ್ ಶೋ ಮೂಲಕ ಬಿರುಸಿನ ಪ್ರಚಾರ ನಡೆಸಿದರು.
ಈ ಸಂಧರ್ಭ ರಾಜ್ಯ ಮೀನುಗಾರಿಕಾ ಘಟಕದ ಅಧ್ಯಕ್ಷ ರತ್ಮಾಕರ ಸುವರ್ಣ, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಶಾ ಝಮೀರ್, ಜೆಡಿಎಸ್ ದ.ಕ.ಜಿಲ್ಲಾ ಕಾರ್ಯಧ್ಯಕ್ಷ ಇಕ್ಬಾಲ್ ಮೂಲ್ಕಿ, ಬೆಂಗರೆ ವಲಯ ಪಧಾಧಿಕಾರಿಗಳಾದ ಮುಹಮ್ಮದ್ ಬೆಂಗರೆ, ಲತೀಫ್ ಬೆಂಗರೆ , ಮಂಗಳೂರು ದಕ್ಷಿಣ ಜೆಡಿಎಸ್ ಪ್ರ.ಕಾರ್ಯದರ್ಶಿ ಅಲ್ತಾಫ್ ತುಂಬೆ, ಕವಿತಾ, ಶಾರದಾ ಶೆಟ್ಟಿ ಹಾಗೂ ಹಲವು ಕಾರ್ಯಕರ್ತರು , ಬೆಂಗರೆ ವಲಯ ಜೆಡಿಎಸ್ ಯುವ ಕಾರ್ಯಕರ್ತರು ಹಾಗೂ ಹಲವಾರು ಪಕ್ಷದ ಅಭಿಮಾನಿಗಳು ರೋಡ್ ಶೋ ನಲ್ಲಿ ಭಾಗವಹಿಸಿದರು. ಬ್ಯಾಂಡ್ ಮೂಲಕ ನಡೆದ ರೋಡ್ ಶೋ ಆಕರ್ಷಣೀಯವಾಗಿತ್ತು ಮತ್ತು ಜನರಿಂದ ಉತ್ತಮ ಸ್ಪಂದನೆ ದೊರಕಿದೆ.