News Kannada
Saturday, September 23 2023
ಮಂಗಳೂರು

ಮಂಗಳೂರು: 1.15 ಕೋಟಿ ರೂ. ವಂಚನೆ ಪ್ರಕರಣ, ಹಣ ಹಿಂದಿರುಗಿಸಿದ ಆರೋಪಿ ಗಣೇಶ್ ಕದಂ

Rs 41.78 lakh was seized for transporting it without documents. Seized
Photo Credit : Pixabay

ಮಂಗಳೂರು: ಮಂಗಳೂರಿನ ಇಬ್ಬರು ಉದ್ಯಮಿಗಳಿಗೆ 1.15 ಕೋಟಿ ರೂ. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಮುಂಬೈನ ಗಣೇಶ್ ಕದಂ ಎಂಬಾತ 50 ಲಕ್ಷ ರೂ.ಗಳನ್ನು ಹಿಂದಿರುಗಿಸಿದ್ದು ಬಾಕಿ ಉಳಿದ 65 ಲಕ್ಷ ರೂ.ಗಳ ಮೊತ್ತಕ್ಕೆ ಚೆಕ್ ನೀಡಿದ್ದಾನೆ.

ಆರೋಪಿ ಕದಂನನ್ನು ಮುಂಬೈನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡು ಮಂಗಳೂರಿಗೆ ಕರೆತಂದಿದ್ದರು. ಈ ವೇಳೆ ಆತ ಹಣ ನೀಡಲು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಐದು ದಿನಗಳ ಹಿಂದೆ ಮುಂಬೈನಲ್ಲಿ ಮಂಗಳೂರು ಪೊಲೀಸರು ಕದಂನನ್ನು ವಶಕ್ಕೆ ಪಡೆದಿದ್ದರು. ನಂತರ ಆತನನ್ನು ಮಂಗಳೂರಿಗೆ ಕರೆತರಲಾಗಿತ್ತು . ಹಣ ಹಿಂದಿರುಗಿಸಲು ಆರೋಪಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಆತನನ್ನು ಮುಂಬೈಗೆ ಕರೆದೊಯ್ಯಲಾಗಿದೆ. ವಂಚಿಸಿದ ಹಣದ ಪೈಕಿ 50 ಲಕ್ಷ ರೂ.ಗಳನ್ನು ಕದಂ ಹಿಂದಿರುಗಿಸಿದ್ದು 65 ಲಕ್ಷ ರೂ.ಗಳ ಚೆಕ್ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ ಇದು ವಂಚನೆ ಪ್ರಕರಣವಲ್ಲ. ವಿದೇಶಿ ಬ್ಯಾಂಕಿನಿಂದ ದೂರುದಾರರಿಗೆ 300 ಕೋಟಿ ರೂ.ಗಳ ನಾಲಕ್ಕಾಗಿ ಎಲ್ಲ ಸಿದ್ದತೆಗಳನ್ನು ನಡೆಸಲಾಗಿತ್ತು. ಆದರೆ ದೂರುದಾರರು ಮೂಲ ದಾಖಲೆಗಳನ್ನು ನೀಡದ ಕಾರಣ ಲೋನ್ ಸ್ಥಗಿತಗೊಂಡಿತ್ತು ‘ ಎಂದು ಆರೋಪಿ ಕದಂ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ.

‘ಈ ಪ್ರಕರಣದಲ್ಲಿ ಕಳತ್ತೂರು ವಿಶ್ವನಾಥ ಶೆಟ್ಟಿ ಪಾತ್ರವಿಲ್ಲ. ತನ್ನನ್ನು ದೂರುದಾರರಿಗೆ ವಿಶ್ವನಾಥ್ ಶೆಟ್ಟಿ ಪರಿಚಯಿಸಿದ್ದರು ಅಷ್ಟೇ ‘ ಎಂದು ಪೊಲೀಸ್ ವಿಚಾರಣೆ ವೇಳೆ ಕದಂ ಸ್ಪಷ್ಟ ಪಡಿಸಿದ್ದಾನೆ .

ಮತ್ತೋರ್ವ ಬಿಲ್ಡರ್ ಗೂ ವಂಚನೆ? ಆರೋಪಿ ಗಣೇಶ ಕದಂ ಮಂಗಳೂರಿನ ಮತ್ತೊಬ್ಬ ಹೆಸರಾಂತ ಬಿಲ್ಡರಿಗೆ ಲೋನ್ ತೆಗೆಸಿ ಕೊಡುವ ನೆಪದಲ್ಲಿ 10 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಈ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿಲ್ಲ. ಈ ಹಿಂದೆ ಕಾಂಗ್ರೆಸ್ ನಲ್ಲಿದ್ದು ಇದೀಗ ಬಿಜೆಪಿ ಸೇರಿರುವ ಮೂಡಬಿದ್ರೆ ರಾಜಕಾರಣಿಯೊಬ್ಬರು ಪ್ರಕರಣವನ್ನು ರಾಜಿ ಮಾತುಕತೆ ಮೂಲಕ ಮುಗಿಸಲು ಸಿದ್ಧತೆ ನಡೆಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಪಡೆದಿದ್ದ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ್ ಶೆಟ್ಟಿ ಇದೀಗ ಅನಾರೋಗ್ಯ ಕಾರಾಣಗಳಿಗಾಗಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಬಿಟ್ಟು ಹೊರತೆರಳದಂತೆ ನ್ಯಾಯಾಲಯ ಶರತ್ತು ತೀರಿಸಿದೆ. ಆರೋಪಿ ವಿಶ್ವನಾಥ್ ಶೆಟ್ಟಿ ಪರವಾಗಿ ಮಂಗಳೂರಿನ ಯುವ ನ್ಯಾಯವಾದಿ ಎಲಿಜಬೆತ್ ನೀಲಿಯಾರ ವಾದಿಸಿದ್ದರು.

ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆ ‘ರೋಹನ್ ಕಾರ್ಪೊರೇಷನ್’ ಮುಖ್ಯಸ್ಥರಾದ ರೋಹನ್ ಮುಂತೇರೋ ಮತ್ತು ತೊಕ್ಕೊಟ್ಟುವಿನ ‘ಹರ್ಷ ಫೈನಾನ್ಸ್‌’ನ ಮಾಲಕ ಹರೀಶ್ ರವರಿಗೆ ಕಳತ್ತೂರು ವಿಶ್ವನಾಥ್ ಶೆಟ್ಟಿ ಮತ್ತು ಮುಂಬೈನ ಕದಂ ಎಂಬವರು 300 ಕೋಟಿ ರೂ. ಸಾಲ ತೆಗೆಸಿ ಕೊಡುವ ಆಮಿಷ ಒಡ್ಡಿ 1.15 ಕೋಟಿ ರೂ. ಹಣವನ್ನು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ವಿರುದ್ಧ ದೂರು ದಾಖಲಾಗಿತ್ತು.

See also  ರುಡ್‍ಸೆಟ್ ಸಂಸ್ಥೆಗೆ ಭೇಟಿ ನೀಡಿದ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು