News Kannada
Tuesday, September 26 2023
ಮಂಗಳೂರು

ಮಂಗಳೂರು: ಬಾಲಗೋಕುಲದಿಂದ ಎಳೆಯರಲ್ಲಿ ಸಂಸ್ಕಾರ ಜಾಗೃತಿ – ಡಾ.ಭರತ್‌ ಶೆಟ್ಟಿ

Sanskar Awareness Among Young People From Balagokula - Dr. Bharath Shetty
Photo Credit : News Kannada

ಮಂಗಳೂರು: ಹಿಂದೂ ಸಂಸ್ಕೃತಿ ಸಂಸ್ಕಾರಗಳನ್ನು ಎಳೆಯರ ಮನಸ್ಸಿನಲ್ಲಿ ಮೂಡುವಂತೆ ಪ್ರೆರೇಪಿಸುವ ಶಿಕ್ಷಣ ಬಾಲಗೋಕುಲ ಕೇಂದ್ರಗಳಲ್ಲಿ ಸಿಗುತ್ತದೆ. ಉತ್ಕ್ರಷ್ಟ ಭಾರತೀಯ ಪರಂಪರೆಯ ನಡವಳಿಕೆ ಸಮಾಜವನ್ನು ಒಗ್ಗೂಡಿಸುತ್ತದೆ. ಒಡೆದು ಆಳುವ ನೀತಿಗೆ ನಾವು ಚದುರಬಾರದು. ಸಾಂಘಿಕ ಶಕ್ತಿಯಾಗಿ ಪ್ರೀತಿ ಗೌರವಗಳ ಅಮೃತ ಭಾವನೆಯಿಂದ ಸಮಾಜದಲ್ಲಿ ಶಕ್ತಿಶಾಲಿ ಹಿಂದೂ ಸಮಾಜವಾಗಬೇಕು ಎಂದು ಶಾಸಕ ಭರತ್‌ ಶೆಟ್ಟಿ ಹೇಳಿದರು.

ಶ್ರೀ ರಾಮ ಯುವಕ ಸಂಘ ಪ್ರಾಯೋಜಿಸಿದ ಶ್ರೀ ರಾಮ ಬಾಲಗೋಕುಲದ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು. ಜಾತಿ ವೈಷಮ್ಯಗಳು ವಿನಾಶಕಾರಿ ಪ್ರವೃತ್ತಿಯಾಗುತ್ತದೆ. ಸದೃಢ ಹಿಂದೂ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಂದಾಗಬೇಕು. ದ್ವೇಷ ಏನನ್ನೂ ಸಾಧಿಸದು.

ಪ್ರೀತಿ ಸಾಧನೆಯ ಪ್ರತೀಕ ನಾವೆಲ್ಲಾ ಪ್ರೀತಿಯಿಂದ ಬಾಳೋಣ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಮಾನಯಾನ ಇಲಾಖೆಯ ಉಪ ನಿರ್ದೇಶಕ ರಾದ ಜಗದೀಶ್ ಬಳ್ಳಾಲಬೈಲ್ ಶುಭಾಶಯಗಳು ಹಾರೈಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಜನಾರ್ದನ ಗೌಡ ಮುಚ್ಚೂರು ಪ್ರಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಆನಂದ್ ಮಿಜಾರ್, ಶಕ್ತಿಕೇಂದ್ರದ ಅಧ್ಯಕ್ಷ ಗೋಪಾಲ್ ಕಂದಲಬೆಟ್ಟು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ರೂಪೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಾಲಗೋಕುಲದ ಮಾತಾಜಿಯವರಾದ ಸರಿತಾ ಮಾಲತಿ, ಧನ್ಯ, ಪೂಜಾ, ಚಂದ್ರಿಕಾ, ದಿವ್ಯಾ ನಿರ್ವಹಣೆಗೈದರು. 116 ಮಂದಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

See also  ಕಾರವಾರ: ಆಳ ಸಮುದ್ರದ ಮೀನುಗಾರಿಕಾ ಬೋಟ್ ಮುಳುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು