ಮಂಗಳೂರು: ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಲ್ಲಿ ಯುವ ರೆಡ್ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್ಕ್ರಾಸ್ ದಿನವನ್ನು ಮೇ 9ರಂದು ರಂದು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದ.ಕ, ಕಾರ್ಯದರ್ಶಿ ಸಂಜಯ್ ಶೆಟ್ಟಿ ಮಾತನಾಡಿ ವಿಶ್ವ ರೆಡ್ಕ್ರಾಸ್ ದಿನವನ್ನು ಶ್ಲಾಘಿಸಿದರು ಹಾಗೂ ಯುವಜನತೆಯಲ್ಲಿ ನಾಯಕತ್ವದ ಬೆಳವಣಿಗೆ ಉತ್ತಮ ಸಮಾಜಕ್ಕೆ, ವ್ಯಕ್ತಿತ್ವ ವಿಕಸನಕ್ಕೆ ರೆಡ್ಕ್ರಾಸ್ ಸಹಕಾರಿ ಎಂದರು.
ಯೇನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಕುಲಸಚಿವರು ಡಾ. ಗಂಗಾಧರ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಯೇನೆಪೋಯ ದಂತ ಕಾಲೇಜು ಪ್ರಾಂಶುಪಾಲರು ಡಾ. ಲಕ್ಷ್ಮಿಕಾಂತ್ ಚಾತ್ರ ಅತಿಥಿಗಳಾಗಿ ಭಾಗವಹಿಸಿದ್ದರು. ವಿಕ್ಕಿ ಜೊಸ್ವಿಟಾ ಡಿಸೋಜ ಸ್ವಾಗತಿಸಿ, ನಿತ್ಯಾಶ್ರೀ ವಂದಿಸಿದರು. ಅದ್ರಿಜಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಯುವ ರೆಡ್ಕ್ರಾಸ್ ಸ್ವಯಂ ಸೇವಕರಿಗೆ ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನದ ತರಬೇತಿ ಮತ್ತು ಅಂತರ ಕಾಲೇಜು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.