ಬಂಟ್ವಾಳ: ಮಾಣಿ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡು ಮಂಗಳೂರುಆಸ್ಪತ್ರೆಯಲ್ಲಿ ದಾಖಲಾದ ಪೆರಾಜೆಯ ಹಿಂದೂ ಸಂಘಟನೆಯ ಕಾರ್ಯಕರ್ತ ಮಹೇಂದ್ರರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬುಧವಾರ ರಾತ್ರಿ ಭೇಟಿಯಾಗಿ ಧೈರ್ಯ ತುಂಬಿದರು.
ಬೆಂಗಳೂರಿನಲ್ಲಿ ಅಧಿವೇಶನ ಮುಗಿದ ತಕ್ಷಣವೇ ರಾತ್ರಿಯೇ ಮಂಗಳೂರಿಗೆ ಆಗಮಿಸಿದ ಬಂಟ್ವಾಳ ಶಾಸಕರು ನೇತ ಆಸ್ಪತ್ರೆಗೆ ತೆರಳಿದ್ದಾರೆ. ಮಾಣಿಯಲ್ಲಿ ಕಾಂಗ್ರೆಸ್ ಗೂಂಡಾಗಳಿಂದ ಹಲ್ಲೆಗೊಳಗಾದ ಈಗಾಗಲೇ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರುವಿನಲ್ಲಿ ಅಧಿವೇಶನದ ನಡುವೆಯೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಶಾಸಕರು ಸೂಚಿಸಿದ್ದರು.