ಮಂಗಳೂರು: ಪುತ್ತೂರಿನ ಕಾಂಗ್ರೆಸ್ ಚುನಾವಣೆ ವೇದಿಕೆಯಲ್ಲಿ ಶಾಸಕರು ಜೂ. 9ರಂದು ಸಂಜೆ ಕಾರ್ಯಕರ್ತರ ಸಭೆಯನ್ನು ಕರೆದಿದ್ದರು. ಸಭೆ ಆರಂಭವಾಗುತ್ತಿದ್ದಂತೆಯೇ ಅನೇಕ ಫಲಾನುಭವಿಗಳು ಅರ್ಜಿಯೊಂದಿಗೆ ಶಾಸಕರ ಸುತ್ತ ನೆರೆದಿದ್ದರು.
ನೂರಾರು ಸಮಸ್ಯೆಗಳನ್ನು ಹೊತ್ತ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಶಾಸಕ ಅಶೋಕ್ ರೈ ಅವರ ಮುಂದೆ ಹೇಳುತ್ತಿದ್ದರು. ಈ ನಡುವೆ ವಿಕಲಚೇತನ ವ್ಯಕ್ತಿಯೋರ್ವರು ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ತಂದೆಯೊಂದಿಗೆ ಶಾಸಕ ಅಶೋಕ್ ರೈ ಮುಂದೆ ಬಂದಾಗ, ವ್ಯಕ್ತಿ ವಿಕಲ ಚೇತನ ಎಂದು ತಿಳಿದ ಶಾಸಕರು ಎದ್ದು ನಿಂತು ವ್ಯಕ್ತಿಯ ಅರ್ಜಿಯನ್ನು ಸ್ವೀಕರಿಸಿ ಅವರ ಸಮಸ್ಯೆಯನ್ನು ಆಲಿಸಿದರು.
ತಕ್ಷಣವೇ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಇನ್ನು ಶಾಸಕರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.