News Karnataka Kannada
Saturday, April 27 2024
ಮಂಗಳೂರು

ಪರಿಶಿಷ್ಟ ಸಮುದಾಯ-ಪಂಗಡಕ್ಕೆ ಶಾಸಕ ವೇದವ್ಯಾಸ ಕಾಮತರು ನೀಡಿರುವ ಕೊಡುಗೆ ಅಪಾರ

Mla Vedavyasa Kamath's contribution to the Scheduled Castes and Scheduled Tribes is immense.
Photo Credit : News Kannada

ಮಂಗಳೂರು: ನಗರದ ಕೊಡಿಯಾಲ್’ಬೈಲ್ ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ದಲಿತ ಮುಖಂಡರಿಂದ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಶಾಸಕ ವೇದವ್ಯಾಸ ಕಾಮತರ ಅವಧಿಯಲ್ಲಿ ನಗರ ವ್ಯಾಪ್ತಿಯ ದಲಿತ ಕಾಲೋನಿ, ಅಂಬೇಡ್ಕರ್ ಭವನ, ಕುದ್ಮುಲ್ ರಂಗರಾವ್ ಭವನ, ಪೌರ ಕಾರ್ಮಿಕರ ಕಟ್ಟಡ ಹಾಗೂ ದೈವಸ್ಥಾನಗಳಿಗೆ ಹರಿದು ಬಂದಿರುವ ಸುಮಾರು 40 ಕೋಟಿಗಳ ದೊಡ್ಡ ಮೊತ್ತದ ಅನುದಾನಗಳ ಬಗ್ಗೆ ವಿವರಿಸಲಾಯಿತು.

ರಾಜ್ಯ ಸರಕಾರ, ಮಹಾನಗರ ಪಾಲಿಕೆ, ಎಂ ಆರ್ ಪಿ ಎಲ್ ನ ಸಿ ಆರ್ ಎಫ್ ಫಂಡ್ ಹೀಗೆ ಲಭ್ಯವಿರುವ ಎಲ್ಲಾ ಕಡೆಯಿಂದಲೂ ಅನುದಾನ ತರುವಲ್ಲಿ ಶಾಸಕರ ಅವಿರತ ಪ್ರಯತ್ನಕ್ಕೆ ನಮ್ಮ ಸಮಾಜದ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು. ಸತತ ಎರಡನೇ ಬಾರಿಯೂ ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಅವರ ಸಮಾಧಿಗೆ ನಮನ ಸಲ್ಲಿಸುವ ಮೂಲಕ ನಾಮಪತ್ರ ಸಲ್ಲಿಸಿರುವ ವೇದವ್ಯಾಸರು ಕುದ್ಮುಲ್ ರಂಗರಾವ್ ಅವರ ಆಶಯದಂತೆ ದಲಿತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದ್ದು ನಮ್ಮ ಸಮಾಜಕ್ಕೆ ಅವರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ಬಿಜೆಪಿ ಹಾಗೂ ವೇದವ್ಯಾಸರಿಗೆ ಇನ್ನು ಮುಂದೆಯೂ ನಮ್ಮ ಬೆಂಬಲ ಇರುತ್ತದೆ ಎಂದು ದಲಿತ ಮುಖಂಡರು ಹೇಳಿದರು

ಈ ಸಂದರ್ಭದಲ್ಲಿ ಮಾಜಿ ಮೇಯರ್ ಪ್ರವೀಣ್ ಉಮನಾಥ ಅಮೀನ್, ಪ್ರಸನ್ನ, ಬಿಜೆಪಿ ಮಂಡಲದ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಚಿಲಿಂಬಿ, ಎಸ್ಸಿ ಮೋರ್ಚಾ ಕಾರ್ಯದರ್ಶಿ ಗೀತಾ ಭವಾನಿ ಮುಂತಾದವರು ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು