News Karnataka Kannada
Friday, March 29 2024
Cricket
ಮಂಗಳೂರು

ಮೂಡುಬಿದಿರೆ: ಸುಟ್ಟು ಹೋದ ಡಬಲ್ ಇಂಜಿನ್ ಸರ್ಕಾರ – ಅಭಯಚಂದ್ರ ಜೈನ್

Double engine govt burnt out: Abhayachandra Jain
Photo Credit : News Kannada

ಮೂಡುಬಿದಿರೆ: ಮೂಲ್ಕಿಗೆ ಮೋದಿ ಬಂದ ಕಾರಣ ಬಿಜೆಪಿಗೆ ಕಳೆದ ಬಾರಿಗಿಂತ 5019 ಮತ ಕಡಿಮೆ ಬಿದ್ದಿದೆ. ಎರಡೂ ಡಬಲ್ ಇಂಜಿನ್  ಸುಟ್ಟು ಹೋಗಿದೆ ಎಂದು ರಾಜ್ಯದ ಫಲಿತಾಂಶ ಸೂಚಿಸುತ್ತದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಶಾಸಕ ಕೋಟ್ಯಾನ್ ಕ್ಷೇತ್ರದಲ್ಲಿ ವಾಸವಿರದೆ ಮಂಗಳೂರಿನಲ್ಲಿ ನೆಲೆಸಿದ್ದಾರೆ . ಆದರೆ ನಾನು ಕಾರ್ಯಕರ್ತನಾಗಿ ನಿರಂತರ ಕ್ಷೇತ್ರದಲ್ಲಿ ವಾಸಿಸುತ್ತಿದ್ದೇನೆ. ಜಿಲ್ಲೆಯಲ್ಲಿ ಪಕ್ಷ ಬಲ ಪಡಿಸಲು ಬಿ.ಕೆ ಹರಿಪ್ರಸಾದ್‌ರವರನ್ನು ಸಚಿವರಾಗಿ ಮಾಡಿ ಜಿಲ್ಲಾ ಉಸ್ತುವಾರಿ ನೀಡಬೇಕೆಂದು ಆಗ್ರಹಿಸಿದರು. ಅಭಿವೃದ್ಧಿ ಎನ್ನುವುದು ಅವರ ಅವರ ಹಿತಕ್ಕಾಗಿ ನಡೆಯಬಾರದು ಕ್ಷೇತ್ರದ ಅಭಿವೃದ್ಧಿ ಎಲ್ಲ ಜನತೆಗೆ ಅನುಕೂಲವಾಗಿದ್ದರೆ ನಾನು ಕೂಡ ಶಾಸಕರನ್ನು ಬಿಂಬಲಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು ಒಪ್ಪಿಗೊಳ್ಳುತ್ತೇನೆ. ಕರಾವಳಿಯಲ್ಲಿ ಹಿಂದುತ್ವ ಅಲೆ ಇದೆ. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಡವರಿಗೆ ಅತಿ ಹೆಚ್ಚಿನ ಲಾಭ ಮಾಡಿಕೊಟ್ಟಿದೆ. ಕಾಂಗ್ರೆಸ್ ಮಾಡಿದ ಎಲ್ಲಾ ಅಭಿವೃದ್ಧಿ ಯೋಚನೆಗಳು ಹಿಂದುತ್ವ ಮತ್ತು ಬಿಜೆಪಿಯ ದೇವರು ತೋರಿಸುವ ತಂತ್ರಗಾರಿಕೆಯಿಂದ ಮತಗಳಿಸುವಲ್ಲಿ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು