ಮೂಡುಬಿದಿರೆ: ತಮಿಳುನಾಡಿನ ಅರಹಂತಗಿರಿ ಜೈನ ಕ್ಷೇತ್ರದಲ್ಲಿ ನಡೆದ ಪಂಚ ಕಲ್ಯಾಣೋತ್ಸವದಲ್ಲಿ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಭಾಗವಹಿಸಿ, ಆಶೀವರ್ಚನ ನೀಡಿದರು.
ಧರ್ಮದಿಂದ ಆತ್ಮ ಸಂಸ್ಕಾರ, ಆತ್ಮವಿಕಾಸವಾಗುತ್ತದೆ. ಅಧ್ಯಾತ್ಮ ಧರ್ಮದಿಂದ ಜೀವನ ಪಾವನಗೊಳ್ಳುತ್ತದೆ. ಸ್ವರ್ಗಿಯ ಶ್ರವಣಬೆಳಗೊಳ ಬೆಳಗೊಳ ಭಟ್ಟಾರಕ ಸ್ವಾಮೀಜಿಯವರ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳು ನಮ್ಮೆಲ್ಲರಿಗೂ ಮಾದರಿ ಎಂದರು.
108 ಅಮೋಘ ಕೀರ್ತಿ ಅಮರ ಕೀರ್ತಿ, ಯುಗಳ ಮುನಿಗಳನ್ನು ವೇಣೂರು ಮಹಾಮಸ್ತ ಕಾಭಿಷೇಕಕ್ಕೆ ಅಳದಂಗಡಿ ಅರಮನೆಯ ಡಾ ಪದ್ಮ ಪ್ರಸಾದ್ ಅಜಿಲರು, ಮಧುರ ಅಜಿಲ, ವೇಣೂರು ಬಾಹುಬಲಿ ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಪ್ರವೀಣ್ ಆಹ್ವಾನಿಸಿದರು.
ಎಂ.ಕೆ ಜೈನ್, ವಿನೋದ್ ಬಾಕ್ಲಿವಾಲ್, ನಿಹಾಲ್ ಜೈನ್, ಸುಕೀರ್ತಿ ಅಜ್ರಿ ಚೆನೈ, ತ್ರಿಲೋಕ್ಯ ಜೈನ್, ಸಿಗಮಣಿ, ಪ್ರೇಮ್ ಕುಮಾರ, ವಜ್ರ ಕುಮಾರ ಉಪಸ್ಥಿತರಿದ್ದರು.
ಭಟ್ಟಾರಕಶ್ರೀಗಳು ಚೆನ್ನೈ ಬಳಿಯ ಪೊನ್ನೂರು ಮಲೆ, ಕ್ಷೇತ್ರ ಮಹಾ ಆಚಾರ್ಯ 108 ಕುಂದ ಕುಂದರ ತಪೋ ಭೂಮಿ ದರ್ಶನ ಮಾಡಿದರು