ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಎನ್ಐಎ ದಾಳಿಯ ವಿಚಾರ ಹೊರ ಬೀಳುತ್ತಿದೆ. ಬಂಟ್ವಾಳ ತಾಲೂಕಿನ 9 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದೆ.
ತಾಲೂಕಿನ ಗೋಳ್ತಮಜಲು ಗ್ರಾಮದಲ್ಲಿ ಎರಡು ಕಡೆ, ನರಿಕೊಂಬು ಗ್ರಾಮದ ಎರಡು ಕಡೆ, ಮಾಣಿ ಎರಡು ಕಡೆ, ಬೊಳ್ಳಾಯಿ, ನಜೀಪ ನಡು, ಕೊಳ್ನಾಡುವಿನಲ್ಲಿ ದಾಳಿ ನಡೆದಿದೆ.
ಝಕಾರಿಯಾ ಗೋಳ್ತಮಜಲು, ಇಜಾಜ್ ಆಹಮ್ಮದ್ ನರಿಕೊಂಬು, ಅಬುಬಕ್ಕರ್ ಸಿದ್ದೀಕ್ ಕೊಳ್ನಾಡು, ಝಾಕೀರ್ ಸಜೀಪ ನಡು, ಅಬ್ದುಲ್ ಮುಭಾರಕ್ ಬೊಳ್ಳಾಯಿ, ಎಂ.ಡಿ. ಉಜಾಲೈಪ್ ಮಾಣಿ, ಮಹಮ್ಮದ್ ರಮೀಜ್ ನೆಹರುನಗರ, ಆಸ್ಪಕ್ ಗೋಳ್ತಮಜಲು, ಜುಬೈರ್ ನೇರಳಕಟ್ಟೆ ಅವರ ಮನೆಗಳಿಗೆ ದಾಳಿ ನಡೆದಿದೆ.