ಮಂಗಳೂರು: ನಮ್ಮ ಸಮುದಾಯದ ರಾಜ್ಯದಲ್ಲಿ ೪೦ ಲಕ್ಷ ಜನ ಸಂಖ್ಯೆ ಇದೆ. ಈ ಆಧಾರದಲ್ಲಿ ನಮಗೆ ನೀಡಿದ ರಾಜಕೀಯ ಅವಕಾಶ ಕಡಿಮೆ. ನಮ್ಮ ಸಮಾಜದ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮಂಗಳೂರಿನಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸತ್ಯಜಿತ್ ಸುರತ್ಕಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದಿನ ಸರ್ಕಾರ ಕೊನೆಯ ಕ್ಷಣದಲ್ಲಿ ನಮ್ಮ ಸಮುದಾಯಕ್ಕೆ ನಿಗಮ ಮಂಡಳಿ ಘೋಷಣೆ ಮಾಡಿದೆ. ಇದು ಓಲೈಕೆಗಾಗಿ ಮಾಡಲಾದ ಒಂದು ನಿಗಮ.
ಈ ಸರ್ಕಾರ ಸಂಪುಟ ರಚನೆ ವೇಳೆ ಈ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಮೀಸಲಾತಿಯಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ಮಾಡಬೇಕು. ಜಿಲ್ಲೆಯ ಅವಳಿ ಪುರುಷರು ಕೋಟಿಚೆನ್ನಯ್ಯ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕು. ಈ ಹೋರಾಟವನ್ನು ಕಾಂಗ್ರೆಸ್ ಕೂಡಾ ಮಾಡಿತ್ತು. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪ ಗಮಹೆಸರಿಡುವ ಬಗ್ಗೆ ಸರ್ಕಾರದ ಗಮನಸೆಳೆದಿದ್ದೇವೆ.
ಈ ವಿಷಯವನ್ನು ಕೂಡ ಸರ್ಕಾರದ ಗಮನಕ್ಕೆ ತರುತ್ತೇವೆ. ಹೊಸ ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳನ್ನು ಭೇಟಿ ಆಗಿ ಮನವಿ ನೀಡುತ್ತೇವೆ ಎಂದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಹಿಂದೂ ಸಮಾಜಕ್ಕೆ ಏನು ಅನ್ಯಾಯ ಆಗಿದೆ, ಎಂದು ಪೂಂಜಾ ಕೇಳಿದ್ದಾರೆ.
ಏನು ಅನ್ಯಾಯ ಆಗಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತೇನೆ. ನಾಳೆ ಬೆಳ್ತಂಗಡಿಯಲ್ಲಿ ಸುದ್ದಗೋಷ್ಠಿ ಕರೆದಿದ್ದೇನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದರು. ನಾನು ಅಲ್ಲಿ ರಕ್ಷಿತ್ ಶಿವರಾಂ ಪರ ಅಲ್ಲ. ನಮ್ಮ ಸಮಾಜಕ್ಕೆ ಆದ ಅನ್ಯಾಯದ ವಿರುದ್ಧ ಪ್ರಚಾರಕ್ಕೆ ಹೋಗಿರುವುದು ಎಂದರು.