News Kannada
Friday, June 09 2023
ಮಂಗಳೂರು

ಪಕ್ಕಲಡ್ಕ ಯುವಕ ಮಂಡಲ 70 ನೇ ವರುಷದ ಸಂಭ್ರಮಾಚರಣೆ: ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆ

Pakkaladka Yuva Mandal celebrates 70th year, free ambulance launched
Photo Credit : By Author

ಮಂಗಳೂರು: 1953 ರಲ್ಲಿ ರಾತ್ರಿ ಶಾಲೆಯ ಮೂಲಕ ಸ್ಥಾಪನೆಗೊಂಡ ಪಕ್ಕಲಡ್ಕ ಯುವಕ ಮಂಡಲದ 70 ನೇ ವರ್ಷದ ವಾರ್ಷಿಕೋತ್ಸವವು ದಿನಾಂಕ 29-4-2023 ರಂದು ಪಕ್ಕಲಡ್ಕ ಯುವಕ ಮಂಡಲದ ಮೈದಾನದಲ್ಲಿ ನಡೆಯಿತು. ಕಳೆದ 70 ವರುಷಗಳಿಂದ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿರುವ ಪಕ್ಕಲಡ್ಕ ಯುವಕ ಮಂಡಲವು ಈ ಬಾರಿ ಮಹತ್ವದ ಯೋಜನೆಯೊಂದನ್ನು ಕೈಗೊಂಡಿದೆ. ವರುಷದ ಹಿಂದೆ ಕೋವಿಡ್ ಸಾಂಕ್ರಾಮಿಕ ರೋಗ ಹರಡುವ ವೇಳೆ ಕೊರೋನಾ ವಾರಿಯರ್ ಗಳಾಗಿ ಸೇವೆ ಸಲ್ಲಿಸಿದ ಪಕ್ಕಲಡ್ಕ ಯುವಕ ಮಂಡಲದ ಸದಸ್ಯರು ಸೋಂಕಿತ ಮನೆಗಳಿಗೆ ಸಾನಿಟೈಸಿಂಗ್ ಗೊಳಿಸೋದು, ರೋಗಿಗಳಿಗೆ ರಕ್ತದಾನ, ಸೋಂಕಿತ ಮೃತದೇಹಗಳ ಅಂತ್ಯ ಸಂಸ್ಕಾರ ಹೀಗೆ ಹಲವು ಸೇವೆಗಳನ್ನು ಸಲ್ಲಿಸಿದ ಪಕ್ಕಲಡ್ಕ ಯುವಕ ಮಂಡಲವು ಈ ಬಾರಿ 70 ನೇ ವರುಷದ ನೆನಪಿನಲ್ಲಿ ಸಂಗಾತಿ ಶ್ರೀನಿವಾಸ್ ಬಜಾಲ್ ಸ್ಮರಣಾರ್ಥ ಬಜಾಲ್ ಸುತ್ತಮುತ್ತಲಿನ ‌ಗ್ರಾಮದ ಅಸಹಾಯಕ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಉಚಿತ ಆಂಬ್ಯುಲೆನ್ಸ್ ನ್ನು ಕಾರ್ಯಕ್ರಮದ ವೇಳೆ ಲೋಕಾರ್ಪಣೆಗೊಳಿಸಿದೆ.

ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ಅಧ್ಯಕ್ಷರು, ಪಕ್ಕಲಡ್ಕ ಯುವಕ ಮಂಡಲದ ಆಚರಣಾ ಸಮಿತಿ ಗೌರವಾಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಆಂಬ್ಯುಲೆನ್ಸ್ ಕೀಯನ್ನು ಪಕ್ಕಲಡ್ಕ ಯುವಕ ಮಂಡಲದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಮಾಜಿ ವಿದ್ಯಾರ್ಥಿ ಮುಖಂಡ, ಬಂಟ್ವಾಳ ಪುರಸಭೆ ಮಾಜಿ ಸದಸ್ಯರಾದ ಪ್ರವೀಣ್ ಬಂಟ್ವಾಳ ಹಸಿರು ನಿಶಾನೆ ತೋರಿಸಿದರು ಆಚರಣಾ ಸಮಿತಿ ಕಾರ್ಯಾದ್ಯಕ್ಷರಾದ ಬಿ.ನಾಗೇಶ್ ಶೆಟ್ಟಿ ಆಂಬ್ಯುಲೆನ್ಸ್ ವಾಹನ ಚಾಲನೆ ನಡೆಸಿ ಉದ್ಘಾಟಿಸಲಾಯಿತು.

ಈ ವೇಳೆ ವೇದಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಶಾಫೀ ಆಯುರ್ವೇದಿಕ್ ನರ್ಸಿಂಗ್ ಹೋಮ್ ನ ಮ್ಯಾನೇಜಿಂಗ್ ಡೈರೆಕ್ಟರ್ ಡಾಕ್ಟರ್ ಜೈನುದ್ದೀನ್‌, ಕಾರ್ಮಿಕ ಮುಖಂಡರಾದ ಕೆ ಯಾದವ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಯುವ ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ, ಅಸುಂತಾ ಡಿಸೋಜ, ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಉದಯಚಂದ್ರ ರೈ, ಜನತಾ ವ್ಯಾಯಾಮ‌ ಶಾಲೆಯ ಅಧ್ಯಕ್ಷರಾದ ಕೇಶವ ಭಂಡಾರಿ, ಪಕ್ಕಲಡ್ಕ ಯುವಕ ಮಂಡಲ ಅಧ್ಯಕ್ಷರಾದ ದೀಪಕ್ ಬಜಾಲ್ , ಆಚರಣಾ ಸಮಿತಿ ಅಧ್ಯಕ್ಷರಾದ ಸಂತೋಷ್ ಬಜಾಲ್,ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಪ್ರೀತೇಶ್ ಬಜಾಲ್, ಆಚರಣಾ ಸಮಿತಿ ಕಾರ್ಯದರ್ಶಿ ನಾಗರಾಜ್ ಬಜಾಲ್, ಕೋಶಾಧಿಕಾರಿ ಜಗದೀಶ್ ಬಜಾಲ್ ಉಪಸ್ಥಿತರಿದ್ದರು.

See also  ಸಂಸ್ಕೃತಿ-ಪರಂಪರೆಯ ಪ್ರತೀಕ ಮಂಗಳೂರು ರಥೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

15229
Jaya Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು